Poornima ತ್ಗೆಯ ಕಥೆಯಿಂದಾಗಿ ನೆನಪಾತು .. ಮತ್ತೊಂದು ಘಟನೆ
ವಂದು ಸಲ ಗೋಕರ್ಣದ ಹತ್ರ ಬಂಕಿಕೊಡ್ಲಲ್ಲಿ ವಾಲಿಬಾಲ್ ಟೂರ್ನಾಮೆಂಟ್ ಆಗಿತ್ತು. ನಮ್ಮೂರಿನ ಟೀಂನ ಸಂತಿಗೆ ಹೋಗಿದಿದ್ದೆ ನಾನು. ನಮ್ಮ ಟೀಮಲ್ಲಿ ಮೂರೇ ಜನ ಬ್ರಾಹ್ಮಣರು ನಾವು. ನಾನೂ, ದೀಕ್ಷಿತ, ನಾರಣಣ್ಣ.
ವಾಲೀಬಾಲ್ ಟೂರ್ನಮೆಂಟಲ್ಲಿ ಊಟದ ವ್ಯವಸ್ಥೆ ಇರ್ತು. ಹಂಗಾಗಿ ಎಲ್ಲರ ಸಂತಿಗೆ ಊಟಕ್ಕೆ ಹೋಗಿ ಕುಂತ್ಯ ನಂಗವೂವ.
ಬಾಳೆ ಹಾಕುದಲ್ಲ ಅಲ್ಲಿನ ಪದ್ದತಿ.. ಕೊಡದು.. ಕೊಡವ್ವು ಗೌಡಗ ... ಇರಲಿ ತೊಂದರಿಲ್ಲೆ ಹೇಳಿ ಕುಂತಾತು. ಬಡಸ್ವವೂ ಅವೇಯ ಹೇಳಿ ಕಡಿಗೆ ಗೊತ್ತಾಗಿದ್ದು 😬
ತಗ ಉಪ್ಪು ಹಾಕ್ದ
ಉಪ್ನಕಾಯಿ ಆತು ಬಾಳೆಗೆ. ಗಂಡಸ್ರೇ ಬಡ್ಸಿದ್ದ.. ಹಂಗಾಗಿ ಗೌಡ್ಗ ಹೇಳಿ ಗೊತ್ತಾಜಿಲ್ಲೆ ಯಂಗಕ್ಕಿಗೆ. ಅಲ್ಲೇ ವಂದೆರಡ್ ಜನ ಗೌಡತಿಯಕ್ಕ ಇದಿದ್ದ..
"ಯೇ ಗೌಡ್ತಿಯಕ್ಕ ಬಡಸ್ತ್ವನ?" ಅಂದ ನಮ್ಮ ಮೆನೇಜರ ನಾರಣಣ್ಣ.
"ಬಹುಶಃ ಚೊಕ್ಕ ಮಾಡಲೆ ಸಾರ್ಸಲೆ ಆಗಿರವ ತಡ್ಯಾ" ಅಂದೆ ನಾನು
"ಇಲ್ಯ ಟೂರ್ನಾಮೆಂಟಲೆಲ್ಲ ಭಟ್ರೇ ಅಡಗೆ ಮಾಡೂದು" ಅಂದ ಧೀಕ್ಷಿತ.
ಹೀಂಗೇ
ನಮ್ಮಲ್ಲೇ ನಮಗೆ ಸಮಾಧಾನ ಮಾಡ್ಕಂಡಾತು
ತಗಳ ... ಗೌಡ್ತಿ ಅನ್ನದ ಚರಗೆ ಹಿಡ್ಕ ಬಂದೇಬುಡ್ತು.
ಚರಗೆ ವಳಗೆ ಹುಟ್ಟೂ ಇಲ್ಲೆ... ಕೈಯಲ್ಲೇ ಬಡಸದು.
ಯೇ ದೇವರೇ
ಬೇಕ ನಮ್ಮ ಅವಸ್ಥೆ ?! ಎದ್ದು ಹೋಪಂಗೂ ಇಲ್ಲೆ
" ಯೇ ನಂಗ್ ಬ್ಯಾಡದೋ ಊಟಾ" ಅಂದ ದೀಕ್ಷಿತ ಎದ್ದೇ ನಡದ.
ನಾನೂ ಮ್ಯಾನೇಜರ ವಳ್ದ. ಮಕಮಕ ನೋಡ್ತವ
ಅಷ್ಟತ್ತಿಗೆ ಬಂದು ನನಗಿಂತ ಮದಾಲು ಕುಂತ ಮೆನೇಜರಂಗೆ ವಂದ್ ಮುಷ್ಟಿ ಬಡಸೇಬುಟ್ಲು ಗೌಡ್ತಿ.
ತಗ ಈಗ ನನ್ನ ಬಾರಿ. ನಾನು ಎರಡೂ ಕೈಯ ಬಾಳೆ ಮೇಲೆ ಇಟ್ಗಂಡು "ಬ್ಯಾಡಾ ನಾ ಉಂಬೂದಿಲ್ಲ
ಪಾಯ್ಸ ಅದೇ ? ಇದ್ರೆ ಬಡಸೂ" ಅಂದಿ
ಪಾಯಸ ಅಂತೂ ಕೈಯಲ್ಲಿ ಬಡ್ಸಲಾಗ್ತಿಲ್ಯಲೀ... ಹುಟ್ಟಲ್ಲೇ ಹಾಕಗು. ಹೆಂಗಂದ್ರೂ ಅಡಗೆ ಮಾಡದ್ದು ಭಟ್ರೇಯ ಹೇಳಿ ಧೈರ್ಯ ಯಂಗೆ ಧೀಕ್ಷಿತ ಕೊಟ್ಟಿದಿದ್ನಲೀ
"ಅಬಬಬ ಅಣಾ ... ನಮಸ್ಕಾರ .. ಯೇನ್ ತಲೆಯೋ!" ಅಂದ ಮೆನೇಜರ ಎರಡೂ ಕೈ ಜೋಡಸಿ ಕೈಯೇ ಮುಗ್ದಿಗಿದ.
ಅಷ್ಟರಲ್ಲಿ ತಗಳಾ ಹುಳಿ ತಂದು ಸುರ್ಗೇಬುಡ್ತು ಮತ್ತೊಂದ್ ಗೌಡತಿ ಅವನ ಬಾಳೆಯ ಅನ್ನದ ಮ್ಯಾಲೆ. ಮತ್ತೆ ಯನ್ನ ಮಕ ನೋಡ್ತ ಇಂವಾ 😝
ಆ ಮಕ ನಿಸ್ಸಹಾಯನಾಗಿ ಕೊಡ್ಲಿಗೆ ಬಿದ್ದವನ ನಮನಿ ಇತ್ತು.
ಅಂತೂ ಪಾಯ್ಸ ಬಂತು.. ಪುಣ್ಯಕ್ಕೆ ಅದನ್ನ ಹುಟ್ಟಲ್ಲೇ ಬಡ್ಸಿದ್ದು ಗೌಡತಿ. ಅದನ್ನೇ ತಿಂದ ಶಾಸ್ತ್ರ ಮಾಡಿ ಎದ್ದು ಬಂದಾತು. ಮರ್ದಿನ ಮನೆಗೆ ಬಂದು ಜನಿವಾರ ತಗಂಡ್ರೂ ವನ್ನಮನೀ ಜಾತಿಗೆಟ್ಟ ಅನುಭವ ಸುಮಾರು ದಿನ ಇತ್ತು. 😝😝
(ಯನ್ನ ಈ ಕಥೆಯ ಮತ್ತೆಲ್ಲೂ ಹೇಳ್ಕಂಬಂಗಿತ್ತಿಲ್ಲೆ 🙆)
🙏
- ಶ್ಯಾಂ ಭಟ್, ಭಡ್ತಿ
2 ಮೇ 2022, ಹವಿಹಾಸ್ಯ - ಲಘುನಗು
No comments:
Post a Comment