ತಿರ್ಗಾಟದಲ್ಲಿ ನಗೆ
ಕಾಲೇಜು ದಿನಗಳಲ್ಲಿ ಮನೆ ಮೇಲೆ 8:40 ಕ್ಕೆ ಚಿಪ್ಪಿಹಕ್ಕಲ ಬಸ್ಸು ಬತ್ತಿತ್ತು. ನಾನು ಯೋಳದೇ ಯೋಳೂಮುಕ್ಕಾಲಿಗೆ. ಆಸ್ರಿ ಕುಡದು, ನಿತ್ಯಕರ್ಮ ಮುಗ್ಸಿ, ಮಿಂದ್ಕಂಡು, ದೇವರ ತಲೆ ಮೇಲೊಂದು ಹೂವ ಹೊತಾಕಿ, ಗಂಟೆ ತೂಗಿ ಪ್ಯಾಂಟ್ ಹಾಕಕಾರೇ ಶ್ರೀಧರ ಮಡವಾಳ (ಬಸ್ಸಿನ ಡ್ರೈವರ) ಫರ್ಲಾಂಗ್ ದೂರದಿಂದ ಬೋಂಕ್ ಬೋಂಕ್ ಮಾಡ್ತಿದ್ದ. ಅವಂಗೆ ಗೊತಿದ್ದು.. ಓಡಿ ಬಂದು ಬಸ್ ಹತ್ತಂವಾ ಇಂವ ಹೇಳಿ. ಹೆದ್ದಾರಿ ಹತ್ತಿ ಓಡಿ ಬಪ್ಪದ ನೋಡಿರೂ ಗಾಡಿ ನಿಲ್ಸಿ ಕರ್ಕಂಡು ಹೋಗ್ತಿದ್ದ ಪಾಪಾ. ಉಸ್ರು ಬಿಡ್ತಾ ಬಸ್ ಹತ್ತಿದ ಗಳ್ಗೆಲಿ ಶ್ರಿಪಾದಣ್ಣ (ಕಂಡಕ್ಟರ) "ದಿನಾ ವಂದ್ ಹತ್ ನಿಮಿಷ ಬೇಗ ಏಳೂಲಾಗ್ತಿಲ್ಯನ ಶಾಮ"
"ಥೋ ದಿನಾ ಇದೇ ಕಥೆ ಆಗೋತಲಾ"
"ನಾಳಿಂದ ನಿಲ್ಲಸ್ತ್ನಿಲ್ಯೋ ಗಾಡಿಯ" ಹೇಳೆಲ್ಲ ಹೇಳ್ತಿದ್ದ... ನಾ 'ಹೀ' ಹೇಳಿ ಕಿಸೀತಿದ್ದೆ. ಉತ್ರ ಕೊಡದಾದ್ರೂ ಎಂತ!
ನಮ್ಮನೆ ಹತ್ರದ ಸ್ಟಾಪಿಗೆ (ಕೊಳಪೆಹೊಂಡ) ಹೋಗಿ ನಿಂತ ದಾಖಲೆನೇ ಇಲ್ಲೆ ಯಾನು. ಈ ಕಂಡಕ್ಟರಣ್ಣಯ್ಯ ಪಾಪ ದಿನಾ ಹೇಳ್ತ ಹೇಳಿ ಆವತ್ತೊಂದಿನ ಸ್ಟಾಪಿಗೇ ಹೋಗಿ ನಿಂತುಬಿಟಿದ್ದಿ. ಬಸ್ ಹತ್ತಿದ್ದೇ ಡ್ರೈವರ ಕಂಡಕ್ಟರನ ಹತ್ರ ಹೇಳ್ತಾ "ಓ ವಡ್ಯಾ, ಇವತ್ತು ಸೂರ್ಯ ಯಾಬದಿಗೆ ಹುಟ್ಟಾನೆ?! ...ಮಾಸ್ತರ್ ಮನೆ ಮಾಣಿ ಕೊಳಪೆಹೊಂಡಕ್ ಬಂದ್ಬುಟಾನೆ... ಪ್ರಳಯ ಹತ್ರ ಬಂತನ್ರೋ !!?" 😂😂😜😝
ಅವ್ಕಿಬ್ರಿಗೂ ಆಗ ನನ್ನ ಮೇಲಿಪ್ಪ ಕಾಳಜಿಗೂ, ನನ್ನಪ್ಪನ ಮೇಲಿಪ್ಪ ಅವರ ಗೌರವಕ್ಕೂ ಸಂಬಂಧ ಇತ್ತು. ಅವರ ಮೈಮನಗಳು ಸದಾ ಹಾಯಾಗಿರಲಿ 🙏🙏😍💕
- ಶ್ಯಾಂ ಭಟ್, ಭಡ್ತಿ
1 ಜೂನ್ 2022, ಹವಿಹಾಸ್ಯ - ಲಘುನಗು
No comments:
Post a Comment