Oct 16, 2012

ಪಟ್ಟಂಗ

ನಾ ಉಮ್ರ ಕಿ ಸೀಮಾ ಹೋ.. ನ ಜನ್ಮ್ ಕಾ ಹೋ ಬಂಧನ್ -
 ಜಗಜೀತ್ ಸಿಂಗ್ ರ ಗಝಲ್ ..."ಹೋಂಟೋ ಸೇ ಛೂಲೋ ತುಮ್.. ಮೇರಾ ಗೀತ್ ಅಮರ್ ಕರ ದೋ..."  ಕೇಳಿ... ಸುಂದರವಾಗಿ ಹಾಡತಾರೆ (ಹಾಡುವ ತಾರೆ) ಅವರು. ಅವರ ಶೈಲಿಯಿಂದಾಗಿಯೇ ಆ ಹಾಡು ತುಂಬ ಅರ್ಥಗರ್ಭಿತವಾಗಿದೆ ಅನಿಸಿಬಿಡತದೆ. ಸುಮ್ಮನೇ ಆ ಹಾಡಿನ ಸಾಹಿತ್ಯದೆಡೆಗೆ ಒಮ್ಮೆ ಯೋಚಿಸುವುದಕ್ಕಿಂತ ಅವರ ಹಾಡಿನ ಮಧ್ಯೆ ಮಧ್ಯೆ ಅವರು ಕೊಡುವ ವಿವರಣೆಗಳು ಆ ಹಾಡಿನ ಮಹತ್ವವನ್ನ ಸಾರುತ್ತವೆ ...ಹೊಗಳುತ್ತದೆ...ಅರ್ಥೈಸುತ್ತವೆ. ಆ ವಿವರಣೆಗಳೇ ಅವರನ್ನ ಜಗಜೀತ್ ಸಿಂಗ್ ರನ್ನಾಗಿಸಿರಬಹುದು ಎನ್ನಿಸಿಬಿಡತದೆ.
 ಹಾಡಿನ ಮಧ್ಯದ ವಂದು ಸಾಲು - "ನಾ ಉಮ್ರ ಕಿ ಸೀಮಾ ಹೋ.. ನ ಜನ್ಮ್ ಕಾ ಹೋ ಬಂಧನ್" ದ ಅರ್ಥ ಅವರ ವಿವರಣೆಯಿಂದ ಅರ್ಥಗರ್ಭಿತವಾಗತದೆ... ವಿವರಿಸುತ್ತಾರೆ ಅವರು... 

’ಪ್ರೇಮೀ ಥೇ ದೋ.... ವೋ ಶಾದೀ ಕರನಾ ಚಾಹತೇ ಥೇ... ತೋ ಅಪನೇ ಮಾ ಬಾಪ್ ಕೇ ಪಾಸ್ ಲೇ ಗಯಾ ಲಡಕಾ... ಲಡಕೀ ಕೋ ಮಿಲವಾಯಾ.. ಕಹಾ ಇಸ್ ಸೇ ಶಾದೀ ಕರನಾ ಚಾಹತಾ ಹೂಂ... ಬೋಲೇ ಠೀಕ್ ಹೈ....ಇಸಕೀ ಜನಮ್ ಪತ್ರೀ ಮ್ಯಾಚ್ ಕರತೇ ಹೈ.... ವೋ ಬೋಲೇ ಕೀ.. ಯೇ ಶಾದೀ ತೋ ನಹೀ ಹೋ ಸಕತೀ...ಕ್ಯೋಂ..ಕ್ಯೋಂ ನಹೀ ಹೋ ಸಕತೀ? .... ಲಡಕೀ ತುಮಾರೀ ಸೇ ಬಡೀ ಹೈ ದೋ ಸಾಲ್... ತೋ ಇಸ್ ಮೇ ಕ್ಯಾ ಹೈ...ದೋ ಸಾಲ್ ಕೇ ಬಾದ್ ಶಾದೀ ಕರೇಂಗೇ?!!’

’ಏಕ್ ಭಾಯ್ ಸಾಬ್ ನೇ Add ನಿಕಾಲಾ ಪೇಪರ್ ಮೇ... ಅಛ್ಛೇ ಥೇ... Agriculturist ಥೇ... ಕೀ I want to get married  ಔರ್ ಏಕ್ ಹೀ ಶರ್ತ್ ಹೈ... ಕೇ ಡೌರೀ ಮೇ... I want a Tractor.... ಔರ್ ನೀಛೇ underline ಕಿಯಾ ಹುವಾ ಥಾ Please send the Photograph of the tractor immediately.’

"ನಾ ಉಮ್ರ ಕೀ ಸೀಮಾ ಹೋ .. ನಾ ಜನಮ್ ಕಾ ಹೋ ಬಂಧನ್.. ಜಬ್ ಪ್ಯಾರ್ ಕರೇ ಕೋಯೀ ತೋ ದೇಖೇ ಕೇವಲ್ ಧನ್... ನಯೀ ರೀತ್ ಚಲಾಕರ್ ತುಮ್... ಯೇ ರೀತ್ ಅಮರ ಕರದೋ... ಮೇರಾ ಗೀತ್ ಅಮರ ಕರದೋ ..." ಎಂಬ ಸಲ್ಲುಗಳು ಅರ್ಥಗರ್ಭಿತವಲ್ಲವೇ? 
 ಹಾಡಿನ ಮಧ್ಯದ ಉಪಕಥೆಗಳು ಹಾಸ್ಯಮಿಶ್ರಿತವಾಗಿದ್ದರೂ ಅವುಗಳ ಅರ್ಥ ಹಾಡನ್ನು ಪೂರ್ಣಗೊಳಿಸುತ್ತವೆ ಇನ್ನೂ ಸುಂದರವಾಗಿಸುತ್ತವೆ ... ಆಹಾ 

ಉಲ್ಲೇಖ -  http://www.youtube.com/watch?v=VAKbHtOuxAs

   --------------------------------------------------------------------


(17 ಅಕ್ಟೋಬರ್ 2012)
ಮಕ್ಕಳು... ಹುಡ್ರು... ಹುಡಗ್ರು... ಶಣ್ ಮಕ್ಕ... ಅವರ ಮನಸು ಎಷ್ಟು ನಿರ್ಮಲ.... ಶುದ್ಧವಾಗಿರತು... ಪ್ರತಿಯೊಬ್ಬರ ಪ್ರೀತಿಗೆ ಸ್ಪಂದಿಸ್ತ ಅವು.... ಅಪ್ಪಿ ಮುದ್ದಾಡಿರೆ ಖುಷಿ ಕೊಡತ. ಯಾವಾಗಲೂ "ಶೀ ನೀ ವಾಸನೆ... ನಿನ್ನ ಮೈ ವಾಸನೆ" ಹೇಳತ್ವಿಲ್ಲೆ.
ಪ್ರೀತಿಯಲ್ಲಿ ತಾರತಮ್ಯ ಇಲ್ಲೆ ಅವಕೆ... ಹುಂ, ಅಪ್ಪ ಅಮ್ಮನ ಮ್ಯಾಲೆ ವಾತ್ಸಲ್ಯ ಮತ್ತು ಭರವಸೆ ಸಲ್ಪ ಜಾಸ್ತಿ ಇದ್ದರೂವ.... ಪ್ರೀತಿಯಲ್ಲಿ ತಾರತಮ್ಯ ಧೋರಣೆ ಗೊತ್ತಿಲ್ಲೆ ಅವಕೆ... ಮುಗ್ಧರು ಅವು....
ನಾವೂ ಆ ಬಾಲ್ಯಾವಸ್ಥೆಯ ದಾಟಿ ಬಂದಾಜು.... ಆದರೆ ಆ ಮುಗ್ಧತನ ನಮ್ಮಿಂದ ಯಾವಾಗ ಹೋತು ಹೇಳೇ ಗೊತ್ತಾಜಿಲ್ಲೆ... ಬಹುಶಃ ನನ್ನ ಮನಸಲ್ಲಿ ಅವ ಕೆಟ್ಟವ ಇವ ವಳ್ಳೆಯವ ಹೇಳಿ ಶುರುವಾದದ್ದೇ ೮ನೇತಿಗೆ ಹೋದ ಮ್ಯಾಲೆ... ಬಹುಶಃ ಈಗಿನ ಹುಡ್ರಿಗೆ ಇದಕ್ಕೂ ಮೊದಲೇ ಗೊತ್ತಾಗ್ತನ ಗೊತ್ತಿಲ್ಲೆ.
ಏನೇ ಆಗಲಿ ಮುಗ್ಧ ಮನಸನ್ನ ನಾವು ಮಗುವಿನಂಥಾ ಮನಸು ಹೇಳಿ ಹೊಗಳತ. ಮಗುವಿನ ಮನಸು ಶುದ್ಧ - ಪರಿಶುದ್ಧ. ಆ ಪರಿಶುದ್ಧ ಮನಸು ಯಾವುದು ವಳ್ಳೇದು ಕೆಟ್ಟದ್ದನ್ನು ನೋಡತಿಲ್ಲೆ. ಯಾವುದನ ಮಾಡವು ಕಾಣತ ಅದನ್ನೇ ಮಾಡತು... ಅದೇ ಹುಡುಗಾಟಿಕೆ. "ಹುಡಗಾಟಗತಿ ಮನಷಾ ಅಂವಾ" ಹೇಳದನ್ನ ಕೇಳಾಜು ನಾವು. ದೊಡ್ಡಾದ ಮ್ಯಾಲೂ ಶಣ್ ಹುಡ್ರಾಂಗೇ ಆಡದನ್ನ ಹುಡಗಾಟಿಕೆ ಬುದ್ಧಿ ಹೇಳಾಗತು ನಾವು.
ಈಗ ನಮ್ಮಲ್ಲಿ ಅವಶೇಷವಾಗಿ ಇಪ್ಪದು ಅಂದರೆ ಹುಡುಗಾಟಿಕೆ ಮಾತ್ರ. ಅದೂ ಯಾವುದೋ ಗೆಳೆಯರ ಸ೦ತಿಗೆ ವಾರಾ೦ತ್ಯಗಳಲ್ಲಿ ಕಳದೋಗತು. ಆ ಮಗುವಿನಂಥ ಮನಸ್ಸು ನಮ್ಮಲ್ಲಿಲ್ಲೆ ಈಗ. ಅದ್ಯಾವಾಗೋ ಕಳೆದೋಜು. ಆ ಮನಸು ಇದ್ರೆ ಎಷ್ಟು ಚೆಂದ!!
ಎಷ್ಟೋ ಸತಿ ಯೋಚನೆ ಮಾಡದಿದ್ದು..”ಆ ಹುಡುಗು ಮನಸ್ಸನ್ನ ಮತ್ತೆ ವಾಪಸ್ಸು ತ೦ದಕ್ಯಳವು..... ಕೊನೇ ಪಕ್ಷ ಪುರಸೊತ್ತು ಮಾಡಕ್ಯಂಡು ವಾರದಲ್ಲೊಂದಿನ.. ಅಥವ ತಿಗಳಲ್ಲೊಂದಿನ..... ಕಟ್ಟಕಡೆಗೆ ನಾಲ್ಕಾರು ತಿಂಗಳಿಗೊಂದು ದಿನವಾದರೂ  ಹುಡ್ರ ಹಾಂಗೇ ಆಡವು... ಆ ವಂದು ದಿನಕ್ಕಾರೂ ಹುಡ್ರ ಮನಸಿನ ಹಾಂಗೇ ನಮ್ಮ ಮನಸ ಪರಿವರ್ತನೆ  ಮಾಡಕ್ಯಳವು... ಯಾರ ಮ್ಯಾಲೂ ಕನಿಷ್ಟ ಆ ದಿನ ಬೇಜಾರು ಮಾಡಕ್ಯಳಲಿಲ್ಲೆ... ಶಿಟ್ಟು ಮಾಡಲಿಲ್ಲೆ... ಬೇಜಾರು ಮಾಡಲಿಲ್ಲೆ’  ಹೇಳಿ - ಆಗತಿಲ್ಲೆ.

ಹೋಗಲಿ, ಹೀಂಗೇ ವಂದು ದಿನ... ಸುಮ್ಮಂಗೆ ಮೌನ ವೃತ ಮಾಡವು ಅಂದಕ್ಯಂಡಿದ್ದಿ - ಅದೂ ಆಗತಿಲ್ಲೆ ಹಣೇಬರ.
ಯಾವುದೋ ವಂದು ದಿನ.... ಹುಡ್ರ ಹಾಂಗೇ ವಟವಟಾ ಹಲಬವು - ಆಗತಿಲ್ಲೆ
ಯಾವುದೋ ವಂದು ದಿನ .... ನಿಯಮಿತವಾಗಿ... ಕಟಕಟಿಯಾಗಿ .... ಉಪವಾಸ ಮಾಡವು - ಆಗತಿಲ್ಲೆ
ಯಾವುದೋ ವಂದು ದಿನ .... ಹುಡ್ರ ಹಾಂಗೇ ಕಂಡ ಕಂಡಿದ್ದ ತಿನ್ನವು .... ಮುಕ್ಕವು - ಆಗತಿಲ್ಲೆ 
ಯಾವುದೋ ವಂದು ದಿನ .... ಕವಳನೇ ಹಾಕಲಿಲ್ಲೆ - ಆಗತಿಲ್ಲೆ!
------------------------------------------------------------

ಕವಳ ಅಂದಕೂಡಲೇ ನೆನಪಾತು....
ಕವಳದ ವಂದೇ ವಂದು ತಲುಬು ಇದ್ದು ಯಂಗೆ. ಅದನ್ನ ಚಟ ಹೇಳಲೆ ಆಂ ರೆಡಿ ಇಲ್ಲೆ....
ತಲೆ ಬಿಸಿ ಆತ ಇಲ್ಯ... ಕವಳ ಹಾಕವು....ಈ ತಲೆಬಿಸಿಗೂ ಕವಳಕ್ಕೂ ನಂಟು ಇಪ್ಪದು ಕವಳ ಹಾಕವಕೇ ಗೊತ್ತು. ತಲೆಬಿಶಿ ಆದಾಗ ಕವಳ ಬೇಕು ಗನಾ ತ೦ಬಾಕಿನ ಕವಳ ಹಾಕದಾಗ ಕೆಮಿ ಬಿಶಿಯಾಗತು.... ವಟ್ಟೂ ಬಿಶಿಗೂ ಕವಳಕ್ಕೂ ನ೦ಟು ಹೇಳಲಕ್ಕು. ಅಲ್ಲ ಮತ್ತೂ ಕೆಲ ಸ೦ದರ್ಭದಲ್ಲಿ ಬೇಕಾಗತು ಈ ಕವಳ !
ಬೆಳಗಾಮುಂಚೆ ಆಸರಿ ಕುಡಕಂಡು (ಕೆಲವರು ಎದ್ದಕೂಡಲೇ ಹೋಗತ್ವಕು) ಮಾಡ ನಿತ್ಯಕರ್ಮ ಇದ್ದಲಿ... ಕವಳ ಹಾಕದ್ದೇ ಆಗತೇ ಇಲ್ಲೆ ಅದು.  ಅಲ್ಲ ಅದು ಯನ್ನ ಚಟ ಹೇಳಿ ವಪಗಂಬಲೆ ಯಾ ತಯಾರಿಲ್ಲೆ ಬಿಲ. ಯೆಂತಕೆ ಹೇಳಲೆ ಯಂದೇ ಆದ ತರ್ಕ ಇದ್ದು.  "ಕವಳ" ಇದು ಹವ್ಯಕರ ಮೂಲ ಪದ . ಯಾವುದೇ ವಂದು ವಿಷಯಕ್ಕಾಗಿ ಖೋರಂ ಕೂಡಲಿ... ಬೇಕಾರೆ ಅದು ಗಂಭೀರ ವಿಷಯವೇ ಆಗಿರಲಿ ಮೊದಲು ಎದುರಿಗೆ ಬಪ್-ದು ಕವಳದ ಬಟ್ಟಲು... ಕಡೆಗೆ ಕೇಳದು ಆಸರಿಯ. ದೇವಸ್ತಾನದ ಮೀಟಿಂಗ್ ಇರಲಿ... ಹೆಣ್ಣು ಗಂಡಿನ ಮಾತುಕಥೆಯಿರಲಿ... ಅಥವ ಕೊಡತಗಂಬ ವ್ಯವಾರ ಇರಲಿ.... ಬಂದವರ ಮೊದಲ ಗ್ರಹಿಕೆ ಹೋಪದೂ ಕವಳ ಬಟ್ಟಲ ಮ್ಯಾಲೇಯ. ನಾವು ಯೆಲ್ಲೇ ಇರಲಿ.. ಬೇಕಾರೆ ದೇಶ ಬಿಟ್ಟೇ ಹೋದರೂವ ಈ ಕವಳ ಬಿಡಲಾಗತಿಲ್ಲೆ. ಬಿಟ್ರೆ ಹವ್ಯಕತನನೇ ಬಿಟ್ಟಾಂಗೇಯ. ಜಾತಿ ಕೆಟ್ಟಾಂಗೆ. ಜನಿವಾರ ಮತ್ತೆ ಈ ಕವಳ ಎರಡನ್ನೂ ಬಿಡಡಿ ಹೇಳಂವಾ ಯಾನು...  ಈಗ ಊರು ಬಿಟ್ಟು ದೊಡ್ಡ ದೊಡ್ಡ ಸಾಪಟವೇರ್ ಕಂಪನಿ ಸೇರಕಂಡು ಕವಳ ಬಿಟ್ಟವಿದ್ದ ...ಅಥವ ಕವಳದ ರುಚಿನೇ ಗೊತ್ತಿಲ್ಲದ ಹೈಗರೂ ಇದ್ದ ಮತೇ. ಅವಕೆ ಧಿಕ್ಕಾರ ಇದ್ದು ಯಂದು. ಅಲ್ಲ ಇದು ಯನ್ನ ತರ್ಕ ಮಾತ್ರ. ಬೇಕಾದವು ಬೇಕಾದ ನಮನಿ ತಿಳಕಳ್ಳಿ... ಬೇಕಾರೆ ಇವಂಗೊಂದು ಹೆಳೆ ಬೇಕು ಹೇಳಲಿ. ಯಾರ ಮ್ಯಾಲೂ ಹೇರದಲ್ಲ  ಹೇರಲಲ್ಲ ಯಾ ಧಿಕ್ಕಾರ ಕೂಗಿದ್ದುವ.

ತಲೆಬಿಸಿಗೆ  ವಂದು ಕವಳದ ಈಡು ತುಂಬನ ಕಂಡತು. ಊರಲ್ಲಾದರೆ ಕವಳ ಹಾಕವು ಅನಸಿದಕೂಡಲೇ ಹಣ್ಣಡಕೆ ಇಲ್ದೋರೆ ನೀರಡಕೆ ವಾಸನ್ಯಾರೂ ಸೊಲದು (ಕಡೆಗೆ ಆ ಕೈ ತೊಳಕಂಬಲೆ ವಂದು ಬಾಲ್ಡಿ ನೀರು ವಂದ್ ಬಾರ್ ಶಾಬು ಖಾಲಿ ಆದರೂ ಅಡ್ಡಿಲ್ಲೆ)  ... ಯೆಲೆ ಇಲ್ಲದೋರೆ ತ್ವಾಟಕ್ಕೆ ಹೋಗಿ ಕೈ ಮುಟ್ಟದೇ ಹೋದರೂವ ಯಾರು ಏಣಿ ಎತಗ ಬತ್ತ ಹೇಳಿ ಆಳಸಿತನ ಮಾಡಿ ಕೈಗೆ ಸಿಕ್ಕ ಎಳೇ ಎಲೆನೇ ಚೂಟಗ ಬಂದು...... ಸುಣ್ಣದ ಅಂಡೆಲಿ ಸುಣ್ಣ ಇಲ್ಲದೋರೆ ಸಂಜಾದ್ರೂವ  ನೆಂಟರು ಬಂಜ ಹೇಳಿ ಸುಳ್ ಸುಳ್ಳೇ ಹೇಳಿ ಹಿತ್ಲಾಕಡಿಗ್ ಹೋಗಿ ಹಳೇ ಮಣ್ಣಿನ ಗಡಗಿ೦ದ ಸುಣ್ಣ ತಂದು (ಸಂಜಾದ ಮ್ಯಾಲೆ ಸುಣ್ಣ ತತ್ವಿಲ್ಲೆ... ಅದು ಹಿರೆಯವು ನಡೆಸ್ಕ ಬಂದ ಪದ್ದತಿ.. ಯೆಂತಕ್ಕ ಕಾರಣ ಗೊತ್ತಿಲ್ಲೆ) .... ಹೊಗೆಸೊಪ್ಪಿನ ದಂಟನೇ ಸೊಲದೂ ಸೊಲದೂ ಕವಳ ಹಾಕಾಗತು. ಆದರೆ ಹೇಳಿ ಕೇಳಿ ಅಲ್ಲಿಂದಿಲ್ಲಿಗೆ ಬಂದು ಇಲ್ಲೆಂತ ಮಾಡಿ ಸಾಯವು? ಅದಕೇಯ ಹತ್ರದಲ್ಲೇ ಇಪ್ಪ ವಂದು ಪಾನ್ ಬೀಡಾ ಅಂಗಡಿಯಂವನತ್ರೇ ಕವಳ ಹಾಕತಿ... ಕಟಸಗ್ಯ ಬತ್ತಿ .. ಹಾಂಗೇ ಕವಳ ಹಾಕೀ ಹಾಕೀ ಗುರತ ಯಂಗೆ ಅಂವ ಮತ್ತೆಂತ ದೊಡ್ ಸಂಬಂದ ಅಲ್ಲಾ . ಮದ ಮದಲು ಹಳೇ ಹರಕು ಅಂಗಿ ಹಾಕ್ಯತಿದ್ದ... ಈಗ ನೋಡಿರೆ ಅಂಗಿಗೆ ಇಸ್ತ್ರಿ ಇಲ್ಲದ್ದೇ ಅಂಗಡಿ ಬಾಗ್ಲು ತೆಗೇತ್ನಿಲ್ಲೆ.... ಅಲ್ಲ ಆಗಲಿ ... ಯಮ್ಮನೆ ಆಯಿ ಹೇಳಾಂಗೇಯ ನಾವಂತೂ ಸರೀ ಉದ್ಧಾರಾಜವಿಲ್ಲೆ ....ಯನ್ನಿಂದಾಗಿ ಅವನಾರೂ ಉದ್ಧಾರ ಆದನಲಿ ಹೇಳದೇ  ಖುಷಿ ವನ್ನಮನೀಯ.ಇರಲಿ.

ಈ ಕವಳ ಹಾಕ ’ನಮನಿ’ಇದ್ದಲೀ ಅದು ವಿಶೇಷ.... ಈ ಹಾಲಕ್ಕಿ ವಕ್ಕಲಿಗರು ಇದ್ವಲೀ... ಅವು ಕವಳ ಹಾಕ ನಮನೀ ನೋಡೀರಂತೂವ..... ಎಲ್ಲ ಬಿಟ್ಟ ಮಠದ ಗುರಗಳಿಗೂ ಕವಳ ಹಾಕವು ಹೇಳ ಚಟ ಎದ್ದೋಗವು.... ಆ ನಮನೀ ರಸವತ್ತಾದ ಕವಳ ಹಾಕತ ಅವು. ಅವರ ಕವಳ ಸಂಚಿಂದ ವಂದೊಂದೇ ಎಲೆ ಚೂರು, ಸುಣ್ಣ, ಅಡಕೆ ಹೋಳು ತೆಗದು ಹಾಕದ ನೋಡೀರೆ... ಆ ಸಂಚಿಲಿಪ್ಪ ಸಾಮಾನೇ ಅಮೃತ ಅನಸೋಗತು...

ನೆನಪಿನ ಅಮೃತ - "ಹಶೀ ಅಡಕೆ - ವಣಾ ಎಲೆ ಕವಳ ಹಾಕಲೆ ಆಂ ಯೆಂತ ಘಟ್ಟದ ಕೆಳಗಿನಂವನ?"  ಹೇಳ ವಾಕ್ಯ ...."ಬಿಟ್ಟ ಹೆಂಡತಿಯ ಮತ್ತೆ ಕಟಗ್ಯಂಬಲೆ ಆಂ ಯೆಂತ ರಾಮನ?" ಹೇಳದಾಂಗೇ ಇದ್ದು ಅಲ್ದ ?!! 
__________________________________________________________________

(11 December 2012)

ಕರವಸ್ತ್ರದ ಉಪಯೋಗ
          ಕರವಸ್ತ್ರ ಇಪ್ಪದೆಂತಕೆ? ನಾವು ಚೊಕ್ಕಿರವು ಹೇಳಿ. ಎಲ್ಲೋ ಹೊರಗೆ ಹೋದಾಗ ಊಟ ಮಾಡಿರೆ ಕೈವರಸಗಂಬಲೆ... ಯಾವದೋ ಕೆಟ್ ಗಳಗೇಲಿ ಶಿಮಲು ಬಂದೋದ್ರೆ  ಮೂಗ್ ಚೊಕ್ಕ ಮಾಡಕಂಬಲೆ.... ಕಣ್ಣಿಗೇನಾರೂ ಧೂಳ್ ಗೀಳ್ ಹೋದರೆ ವರಸಗಂಬಲೆ. ಇನ್ನು ಥಂಡಿ ಗಿಂಡಿ ಆದಾಗ ಅದೇ ಕರವಸ್ತ್ರ ನಮ್ಮ ಭೂತಾಯಿಯ  ಹೂಲಸು ಮಾಡಲಾಗ ಹೇಳ ಕಾಳಜಿಯಿಂದ ಅಲ್ಲದೇ ಹೋದರೂ ಯಾರಾರೂ ನೋಡೀರೆ ನಾಚಕೆ ಹೇಳಿ ಅತೀ ಅಮೂಲ್ಯ ಮೂಗನ್ನ ಚೊಕ್ಕ ಮಾಡಿ  ತನ್ನೊಳಗೇ ಇಟಗ್ಯಳವು ಹೇಳ ಸದುದ್ದೇಶದಿಂದ ಕರಚೀಪು ಇಟಗ್ಯಂಬವಿದ್ದ....

           ಆದರೆ ಯನ್ನ ಉದ್ದೇಶ ಅದಲ್ಲ. ಯಾವಾಗಲೂ ಕರವಸ್ತ್ರ ಯನ್ನ ಕಿಸಗೆಲಿ ಇರತು.... ಯಂದು  ವನ್ನಮನೀ ಗಜನೀ ಜನಾಂಗ ... ಶಾರ್ಟ್ ಟೈಮ್ ಮೆಮರೀ ಲಾಸ್ ಹೇಳ ದೊಡ್ಡ ರೋಗ ಇದ್ದು ಯಂಗೆ... ಅದಕಾಗಿ ಯಾನು ಕರವಸ್ತ್ರ ಇಟಗ್ಯತ್ತಿ. ಅಲ್ಲಿ ಇಲ್ಲಿ ಓಡಾಡಕಾರೇ ಯಾವಾಗಾರೂವ ಚೊಲೋ ಕೆಲಸ ನೆನಪಪ್ಪದು. ಆವಾಗ ನೆನಪು ಮಾಡಕ್ಯಂಡ ಕೆಲಸ ಮನಿಗೆ ಬಪ್ಪತಕ ಮರತೋಗತು.  ಅದಕಾಗಿ ಆನ್ ಕಂಡ್‍ಕಂಡ ಉಪಾಯ ಇದು... ಅನುಸರಿಸಿ ಬೇಕಾರೆ.

           ಹೀಂಗೆ ಯೆಂತಾರೂ ಕೆಲಸ ನೆನಪಾದರೆ ಕಿಸಗೆಲಿದ್ದ ಕರಚೀಪ ತೆಗೆಯಲೆ ಮರೀತ್ನಿಲ್ಲೆ ಯಾನು. ಆ ಕರವಸ್ತ್ರ ತೆಗದು ಅದಕೊಂದು ಗಂಟ್ ಬಿಗೀತಿ ತುದೀಗೆ. ತುದೀಗ್ ಯೆಂತಕಪಾ ಅಂದರೆ ವಂದ್ ತಿರಗಾಟದಲ್ಲಿ ನಾಲ್ಕೈದ್ ಕೆಲಸ ನೆನಪಪ್ಪದೂ ಇರತು ಕೆಲು ಸಲವಾ. ಮನೀಗ್ ಬಂದ ಮ್ಯಾಲೆ ದಪ್ತರ ಹೊತಾಕಿ ಪ್ಯಾಂಟ್ ಕಳಚಕಾರೆ ಹಂಬಲಾಗತಿಲ್ಲೆ ಅದೂವ... ನಾಳೆ ಬೆಳಗ್ಗೆ ವಸ್ತ್ರ ತೊಳ್ಯಲೆ ಹಾಕಕಾರೆ ಯಮ್ಮನೆ ಪ್ರಾಣೀಗಾರೂ ನೆನಪಾಗಲೀ ಹೇಳ ಸದುದ್ದೇಶದಿಂದನೇ ಗಂಟ್ ಹಾಕಿದ್ದು ಅದು. ಯಮ್ಮನೆ ಪ್ರಾಣಿ "ಕರಚೀಪಿಗೆ ನಾಲ್ಕ್ ಗಂಟ್ ಇದ್ದಲೀ" ಹೇಳ್ ವದರವೂ ಯಂಗ್ ಆ ನಾಕ್ ಕೆಲಸದಲ್ಲಿ ವಂದೆರಡಾರೂ ನೆನಪಾಗವು.

         ಆದರೂ ಹೆದರಲಿಲ್ಲೆ... ನಾಕರಲ್ಲಿ ಎರಡಾರೂ ನೆನಪಾಗತಲೀ ಹೇಳ ಸಮಾಧಾನ ಇಲ್ಲಿವರಿಗೂ ಇದ್ದಪ...ನಾಳೆ ಯಾರ್ ಕಂಡಿದ್ದ?
__________________________________________________________________________


(* ಇದೊಂದು ತರದ ’ಮನದಾಳದ ಮಾತುಗಳು’.... ಇವು ನನ್ನ ’ಹುಚ್ಚು ಮನಸ್ಸಿನ ಹತ್ತು ಮುಖಗಳು’...  .... ಯಾರೂ ಓದಲೆಂದು ಬರೆಯುವ ಬರಹವೇನಲ್ಲ.... ಮನಸು ಹಾಗೇ.... ಕಛೇರಿ ಕೆಲಸದ ಮಧ್ಯೆ.... ವಾಹನ ಚಾಲನೆಯ ನಡುವೆ ... ಬಸ್ಸು ರೈಲುಗಳ ಕಿಡಕಿಗಳಾಚೆ ಅದೋ ಆ ದಿಗಂತದೆಡೆಗೆ ಕಣ್ಣು ನೆಟ್ಟಾಗ ಬರುವ ಮನದಾಳದ- ಮನದೊಳಗಣ ಯೋಚನೆಗಳಿಗೆ ಯಾವುದೇ ಬೇಲಿ ಬೌಂಡರಿಗಳಿಲ್ಲ.... ಅದೂ ದಿಗಂತದಂತೇ ಸುಂದರ ...ಹಾಗಾಗಿ ಇದೊಂದು ತರಹದ ’ಮನಸಿಗೆ ಬಂದದ್ದ ಗೀಚಲಿಕ್ಕಿರುವ ಸ್ಥಳ’)