May 27, 2012

"ತಡೆ"

"ತಡೆ" ಹೇಳದು ಕ್ರಿಯಾಪದವಾಗಿ ’ತಡಿ, ನಿಲ್ಲು, ತಡಕ್ಯ, ಕಾದು ನೋಡು’ ಹೇಳಲ್ಲ... ನಾಮಪದ ಇಲ್ಲಿ.  
"ತಡೆ" ಹೇಳದು "ತಡೆ ಕಟ್ಟದು" ಹೇಳದರ ಶಾರಟ್ ಫಾರಮ್ಮು.
ದೊಡ್ ಹೊಡತ ಹೇಳವು ಅಂದರೆ ...
ಹಾವಿನ ದ್ವೇಷಕ್ಕೆ ತಡೆ ಹಾಕದು... ವನ್ನಮನೀ ಮೂಢನಂಬಿಕೆ ಅನಿಸಿರೂವ ಪ್ರಾಯೋಗಿಕವಾಗಿ ಅದು ನಿಜ ಹೇಳಿ ಹಿರಿಯವು ಹೇಳತ... ಇದರ ಸತ್ಯಾಸತ್ಯತೆಗಳ ಬಗ್ಗೆ ಮಾಹಿತಿ ಇಲ್ಲೆ ಯಂಗೆ

 ಇದು ವಂದು ರೀತಿಯ ಮಾಟ ಮಂತ್ರ ಇದ್ದಾಂಗೇಯ ...
ನಾಗರಹಾವು ಆಕಸಿಮಿಕವಾಗಿ ಮೆಟ್ಟಿ ಹೋದರೆ (ತುಳಿದರೆ) ಅಥವ ಅದಕ್ಕೆ ತೊಂದರೆ ಕೊಟ್ಟರೆ ಅದಕ್ಕೆ ಸಿಟ್ಟಿರತು ದ್ವೇಷ ಇರತು ಹೇಳತ... ಅದು ಆ ತುಳಿದವನ್ನೇ ತೌರ್ಕ್ಯಂಡು (ಹಿಂಬಾಲಿಸಿ) ಬತ್ತು .... ದ್ವೇಷ ಇಟಗ್ಯಂಡು ಕಚ್ಚತು ಹೇಳಿ ನಂಬಿಕೆ...
ಆ ಹಿಂಬಾಲಿಕೆಯ ದಾರಿ ತಪ್ಪಿಸಲೆ ಮಾಟಗಾರರು ಮಾಡ ಮಂತ್ರ... ಆ ಮಂತ್ರದಿಂದ ಜಪಿಸಿ ಕೊಟ್ಟ ಮಣಿ ಅಥವ ಯಾವುದೋ ವಂದು ವಸ್ತುನ ಹಿಡಕ್ಯಂಡು ಓಡಾಡಿರೆ... ಅವನ ದಾರಿ ತಿಳೀದೇ ಹಾವಿಗೆ ದಾರಿ ತಪ್ಪೋಗತು ಹೇಳ ನಂಬಿಕೆ ಇದ್ದು... ಇದು ಸತ್ಯವೇ ಆಗಿಕ್ಕು ಹೇಳಲೆ ಪ್ರಮಾಣ ಇಲ್ದೋರೂವ ಯನಗಾದ ವಂದು ಅನುಭವ ಹೇಳಿರೆ ನಿಂಗಕೆ ಆಶ್ಚರ್ಯ ಆಗದ್ದೇ ಹೋಗತಿಲ್ಲೆ 

 ಹುಂ ಮತ್ತೊಂದು....ಈ ತಡೆ ಕಟ್ಟಿದ ಕೆಲವೇ ದಿನಗಳಲ್ಲಿ ಆ ಹಾವು ನರಳಿ ನರಳಿ ಸಾಯತು ಹೇಳಿ ನಂಬಿಕೆ ..(ಅಲ್ಲ ಎಷ್ಟ್ ದಿನಾ ಹೇಳಿ ಹೆದರಕ್ಯೋತ ಬದಕದು? ಅದಕೇಯ ಈ ’ತಡೆ’)
ಅದಕೇ ಈ ಕಥೆ... ನಾ ನೋಡಿದ್ದು... ಅರ್ಥ ನಿಂಗವು ಮಾಡಕ್ಯಳಿ ...ನಂಬದು ಬಿಡದು ನಿಂಗಕ್ಕಿಗೆ ಬಿಟ್ಟಿದ್ದು
  


 ಆ ಆರನೇತಿಗೆ ಹೋಪ ಮಾಣಿ ಆವಾಗ....
ದಿನಾ ಶಾಲೆಗೆ ಹೋಪಕಾರೆ ಬಪ್ಪಕಾರೆ ವಂದು ವಳದಾರಿ
(ಶಾರ್ಟ್ ಕಟ್) ಉಪಯೋಗಿಸ್ತಿದ್ಯ.... ಯೆಂತಕೆ ಅಂದ್ರೆ ಮೇನ್ ರೋಡಿಂದ ಹೋದರೆ ಸುಮಾರು ಅರ್ಧ ಕಿಲೋಮೀಟರ್ರು ಜಾಸ್ತಿ ಆಗತಿತ್ತು... ಬರೀ ಯಂಗ ಹುಡ್ರೊಂದೇ ಅಲ್ಲ ...ಈ ಸೈಕಲ್ ನವು.... ಸ್ಕೂಟರ್ ಬೈಕ್ ನವು ಅದೇ ವಳದಾರಿ  ಉಪಯೋಗಿಸ್ತಿದ್ದ... 


ವಂದಿನವಾ ಯಂಗ ಹುಡ್ರೆಲ್ಲ ಆಡಕ್ಯೋತ ಹೋಗತ ಇಪ್ಪಕಾರೆ ಹಿಂದಬದಿಂದ ಇಬ್ಬರು ಕುಂತ ಬೈಕು ಸರ್ರನೇ ಮುಂದೋತು ... ಏನೋ ಬೀಳಲಾಗಿದ್ದ ಯಂಗ ಹುಡ್ರೆಲ್ಲ ಹೆಂಗೆಂಗೋ ಸಂಭಾಳಿಸಗ್ಯಂಡು ನಗ್ಯಾಡತ ಇದಿದ್ಯ ಮನಸಲ್ಲೇ ಶಾಪ ಹಾಕ್ಯೋತವ... ವಬ್ಬಿಬ್ರು ದೊಡ್ದಕ್ಕೇ ಬಯ್ಯದ್ವನ ಬೌಶ.



 ಅಷ್ಟೊತ್ತಿಗೆ... ಮುಂದೆ ಹೋದ ಬೈಕಿನ ಬ್ಯಾಲೆನ್ಸ್ ತಪ್ಪತ ಅಥವ ಯೆಂತೋ ಆತು ಹೇಳಿ ಯಂಗಳ ಅಂದಾಜು.... ಬಿದ್ದ ಇಬ್ಬರೂವ... ಯಂಗಕ್ಕೆ ಖುಷಿ. ಯಂಗಳೆರೂನೂ ದೂಡಾಕಲೆ ಮಾಡಿದಿದ್ಯಲ.... ಬಿದ್ದೆ ಹದಾ ಹೇಳಿ ಓಡಕ್ಯತ್ತ ಮುಂದೆ ಹೋದರೆ.... ಬಿದ್ದವರಲ್ಲೇ ವಬ್ಬಂವಾ ಎದ್ದಕ್ಯಂಡು "ಹುಡ್ರಾ ಮುಂದೆ ಬರಬೇಡಿ ಹಾವೂ ಹಾವೂ" ಹೇಳಿ ಕೂಗದ..
ಯಂಗವೆಲ್ಲ ಅಲ್ಲೇ ನಿಂತ್ಯ.. ಹಾವ ನೋಡೇಬುಡವು ಹೇಳಿ ವನ್ನಮನೀ ಕುತೂಹಲ ಆದರೂ ಹೆದರಿಕೆ. ಅಷ್ಟೊತ್ತಿಗೆ ಬಿದ್ದ ಮತ್ತೊಬ್ಬವನೂ ಎದ್ ಬಂದ....ಹಾಂಗೇ ದಾರಿಲಿ ಹೋಗತಿದ್ದ ಮತ್ತಿಬ್ಬರೂ ಗಟಾರದ ಬದಿಗೆ ನೋಡಕ್ಯಂಡು "ದೊಡ್ ಹಾವೇಯ.. ಗಾಡಿ ಹತ್ತೋಯತ?" ಕೇಳದ



 ಆ ಇಬ್ಬರೂವ ತಡ ಮಾಡಿದ್ವಿಲ್ಲೆ "ಥೋ ..ಹೌದ" ಅಂದವೇಯ ಗಾಡಿ ಹತ್ತಿ ಗುರ್ ಗೆಡಿಸಗ್ಯಂಡು ಪರಾರಿ. ಯಂಗವೂ ಧೈರ್ಯ ಮಾಡಕ್ಯಂಡು ನೋಡಲೆ ಹೋದ್ಯ ಹಾವ... ಹಾವಿಗೆ ಪೆಟ್ಟೇನೂ ಆಗಿತ್ತಿಲ್ಲೆ ಕಾಣತು.... ಬುಸ್ ಬುಸ್ ಗೆಡತಿತ್ತು.... ಜನ ಕೂಡಿದ್ದ ನೋಡಕ್ಯಂಡು ಹೆದರಕೆ ಆಗಿರವು... ಬೈಕಿನವು ಹೋದ ಶಬ್ದನೂ ಆತ ಇಲ್ಯ ...ಅದೂ ಸರ ಸರನೆ ಮುಳ್ ಹಿಂಡ್ ಹಿಂದಬದಿಗೆ ಸರದೋತು... ಯಂಗವೂ ಮನಿಗೆ ಬಂದ್ಯ

 ಆವಾಗೆಲ್ಲವ ಬೆಳಗ್ಗೆ ಮಜ್ಜಾನ್ನ ಎರಡು ಹೊತ್ತೂ ಶಾಲೆ ಇರತಿತ್ತು... ಮಧ್ಯಾಹ್ನ ೧೧ ರಿಂದ ೨ ಗಂಟೆವರಿಗೆ ಮನಿಗೆ ಹೋಗಿ ಉಂಡಕ್ಯ ಬಪ್ಪಲೆ ಹೇಳಿ. ಮಧ್ಯಾಹ್ನ ಆನು ಬ್ಯಾಗನೇ ಹೊಂಟಿ... ಸಂತಿಗೆ ಯನ್ನ ದೋಸ್ತರು ಯೆಲ್ಲವ ಸೇರಕ್ಯಂಡ.. ಹೋಪಕಿರೆ ಅದೇ ದಾರಿಂದ ಹೋಪಲೆ ಹೆದರಿಕೆ ಆದರೂವ ವನ್ನಮನೀ ಕುತೂಹಲನಪ... ಹೋದ್ಯ...

 ಯಂಗವು ಆ ಜಾಗಕ್ಕೆ ಹೋಪಲೂ ಎದುರು ಬದಿಂದ ವಂದು ಬೈಕ್ ಬಪ್ಪಲೂ ಸರೀ ಆತು.ಆ ಹಾವು ಯೆಲ್ಲಿತ್ತ ಯೆಂತ ಸುಟ್ಟಿದ್ದ... ಬಡಕ್ಕನೆ ಬೈಕಿನ ಮ್ಯಾಲೆ ಹಾರಿದ್ದೊಂದ ನೋಡಿದ್ಯ... ಯಂಗವೆಲ್ಲ ದಿಕ್ಕಾಪಾಲು. !!

 ಆ ದಿನದ ಮ್ಯಾಲೆ ಶಾಲೆಗೆ ಹೋಪಕಾರೆ ಬಪ್ಪಕಾರೆ ದೊಡ್ದರಸ್ತೆಯಿಂದನೇ ಹೋಪದು ಬಪ್ಪದು ಮಾಡತಿದ್ಯ...ಮ್ಯಾಲಿಂದ ಮನೆಯವು ಆ ಬದಿಂದ ಹೋಗಡಿ ಹೇಳಿದಿದ್ವ ಇಲ್ಯ... ಹೆದರಿಕೆ.
೩ ೪ ದಿನ ಆಗಿತ್ತನ.. ನೆನಪಿಲ್ಲೆ... ಆ ದಿನ ಶಾಲೆ ಮಲ್ಲಿ ಪೊಕ್ಕ (ಪ್ರಕಾಶ ಹೇಳಿ ಅವನ ಹೆಸರು ಬಿಲ) ಹೊಸ ಸುದ್ದಿ ಹೇಳದ. "ಆ ಹಾವು ಸತ್ತೋಗದೆ ಇವತ್ತು ... ತಡೆ ಕಟಸೀರಂತೆ... ದಿನಾ ಹೋಗ್ ಬರೂ ಗಾಡಿಗೆಲ್ಲ ಹಾರತಿತ್ತಂತೆ" !


 ತಡ್ಯಲ್ ಆಜಿಲ್ಲೆ... ಮಾಸ್ತರ್ರಿಗೂ ಹೇಳದ್ದೇ ಹೋಗಿ ನೋಡೇಬುಡವು ಕಂಡಚು ವಂದ ಸಲವಾ... (ಮಾಸ್ತರೆಂತ ಯನ್ನ ಅಪ್ಪನ ಬಿಡಲೆ) ಶಾಲೆ ಬಿಟ್ಟು ಮನಿಗೆ ಹೋಪಾಕರೆ ನೋಡೇಬಿಡವು...ಹ್ಯಾಂಗೂ ಹಾವು ಸತ್ತೋಜು... ಹೆದರಿಕೆ ಇಲ್ಲೆ ಈಗ ಹೇಳಿ ಹೋದ್ಯ..... ಅಲ್ಲಿ ಸುಮಾರು ೨೫ - ೩೦ ಜನ ಸೇರಿದಿದ್ವೇನ. ಸತ್ತೋದ ಹಾವ ನೋಡಲೆ. 

ನೋಡಿರೆ ಆ ಮದಲನೇ ದಿನ ಹಾವನ ಮ್ಯಾಲೆ ಹತ್ತಿ ಬೈಕಿಂದ ಬಿದ್ದ ಇಬ್ಬರೂ ಇದ್ದಿದ್ದ ಅಲ್ಲಿ. ಎಲ್ಲರೂ ಸೇರಿ ಆ ಸತ್ತೋದ ಹಾವ ವಂದು ಗೋಣೀ ಚೀಲದಲ್ಲಿ ಹಾಕಿ ಆ ಬೈಕ್ ನವಕೆ ಕೊಟ್ವಪ.... ಅವು ಅದನ್ನ ಹಿಡಕ್ಯಂಡು ಗಾಡಿ ಮ್ಯಾಲೆ ಹೋಗೇಬುಟ... ಪಾಪ ಹಾವು ಕಂಡಚು ವಂದ್ಸಲವಾ 



 ಕಡೀಗೆ ಗೊತ್ತಾಗಿದ್ದೆಂತಪ ಅಂದರೆ... ಆ ಎರಡೂ ಜನ ಹಾವಿಗೆ ಗಾಯ ಮಾಡಿದವಿದ್ವಲೀ... ಅವಿಬ್ರೂ ಅದೇ ದಿನ ವಾಪಸ್ ಬಂದಿದಿದ್ವಡ... ಸಂತಿಗೆ ಯಾವನೋ ’ತಡೆ’ ಕಟ್ಟವನ ಕರಕ್ಯಂಡು. ಆ ಜಾಗದ ಮಣ್ಣೆಲ್ಲ ತುಂಬಕ್ಯಂಡು ಹೋಜ್ವಡ... ತಡೆ ಕಟ್ಟಸಿದ್ದ ಹೇಳಾತು... 

"ತಡೆ ಕಟ್ಟಿಸಿದ್ದಕ್ಕೇಯ ಮೂರ್ನಾಕೇ ದಿನದಲ್ಲಿ ಆ ಹಾವು ಸತ್ತೋತು.. ಇಲ್ದೋರೆ ಬಿಡತಿತ್ತಿಲ್ಲೆ"  ಹೇಳಿ ಊರಲ್ಲೆಲ್ಲ ಸುದ್ದಿ.....
ಹುಂ ಗೋಣಿ ಚೀಲದಲ್ಲಿ ತುಂಬಕ್ಯಂಡು ಹೋಗಿ ಆ ಹಾವಿಗೆ ಅಂತ್ಯಸಂಸ್ಕಾರನೂ ಮಾಡಿದ್ವಡ ಕಡಿಗೆ ಹೇಳಿ ಅಡಾಪಡಾ ಹೇಳಿದ್ದ....


 ಉಪಸಂಹಾರ:
೧) ಈಗ ... ಆ ಹಾವು ನಿಜವಾಗಲೂ ಪೆಟ್ಟಾಗಿ ಆ ಜಾಗ ಬಿಟ್ಟು ಹೋಪಲಾಗದ್ದೇ ಇದ್ದಿರವು..... ಅದಕೇ ಬೈಕಿನ ಶಬ್ದ ಆದಾಗೆಲ್ಲ ಮತ್ತೆ ಪೆಟ್ಟಾಗಬುಟ್ರೆ ಹೇಳಿ ಹೆದರಿಕೆ ಆಗತ ಇರವು..... ೩ - ೪ ದಿನ ಆಹಾರ ಇಲ್ಲದ್ದೇಯ .. ಮತ್ತೆ ಆ ಆದ ಗಾಯದ ನೋವಿಂದ ಸತ್ತಿರವು.
೨) ಖರೆಯಾಗಲೂ "ತಡೆ" ಹೇಳ ವಂದು ಮಂತ್ರ ಕೆಲಸ ಮಾಡಿರವು. ಯೆಂತಕೆ ಅಂದರೆ ಗಾಯ ಆದಾಂಗೆ ಕಂಡಿದ್ದಿಲ್ಲೆ ಆ ದಿನ. ನಿಜವಾಗಲೂ ದ್ವೇಷ ಸಾಧಿಸ್ತ ಇತ್ತಗರವು.... ತಡೆ ಕಟ್ಟಿಶಿ ತೆಗದ.  ಮನುಷ್ಯ ಎಷ್ಟು ಸ್ವಾರ್ಥಿ.... 
೩) ನಿಜವಾಗಲೂ ಮನುಷ್ಯ ನಾಗರ ಪಂಚಮಿ ಹೇಳಿ ಪೂಜೆ ಮಾಡತ....... ನಾಗಸೇವೆ ಮಾಡತ (ದಕ್ಷಿಣ ಕನ್ನಡದಲ್ಲಿ ಹೆಚ್ಚಾಗಿ) ನಾಗಮಂಡಲ ಮಾಡತ ಆದರೂ ನಿಜದ ನಾಗರ ಕಂಡರೆ ಹೆದರತ.... ವಂದು ಕಾಗೆನ... ನಾಯಿಯ ರಸ್ತೆ ಮ್ಯಾಲೆ ಪೆಟ್ಟಾಗಿ ಬಿದ್ದಿದ್ದ ನೋಡಿರೆ ಪಾಪ ಅದಕೆ ನೀರು ಹಾಲು ಹಾಕಿ ಕರುಣೆ ತೋರಿಸ ಜನ, ನಾಗರಹಾವು ಸಾಯಲ್ ಬಿದ್ರೂ ಹಾಲು ನೀರು ಇಲ್ಲದ್ದೇ ಸಾಯಾಂಗೆ ಮಾಡಿದ್ವಲೀ... 

ಮೂ.ಪ್ರೇ.(ಮೂಲ ಪ್ರೇರಣೆ) - ಫೇಸ್ ಬುಕ್ ಮತ್ತು ನಿಚ (ನಿರಂತರ ಚಲನೆಯಲ್ಲಿರು ಖ್ಯಾತಿಯ ಪ್ರಶಾಂತ) 
ಧನ್ಯವಾದಗಳು - 
೧) ಈ  ಘಟನೆಯನ್ನು ನಿಜವಾಗಲೂ ಕಥೆಯಾಗಿಸಿದ ಮೂ.ಪ್ರೇ (ಮೂಕಪ್ರೇಕ್ಷಕರು) - ಹರಿ, ಧರ್ಮಿ, ಲೋಕೇಶಣ್ಣ ಮತ್ತು ಇತರರು 
೨) ಈ ಕಥೆ ಬರಿಯಕಾರೆ ನಿಜವಾಗಲೂ  ಮೂಪ್ರೇ ಆಗದ್ದೇ ಅಡ್ದಗಾಲಾಕಿ ತ್ರಾಸು ಕೊಟ್ಟ ಅದೇ ಟೀಂಮು.