Feb 12, 2012

ಕರಿ ಶನಿ

  ದಿಲ್ಲಿ ಹೇಳಲ್ಲ.... ಸಾಮಾನ್ಯವಾಗಿ ಪೂರ ಉತ್ತರ ಭಾರತ ನಮಗೆ ಎಲ್ಲಾ ರೀತಿಯಲ್ಲೂ ವಿಭಿನ್ನ ಅನಿಸಿಹೋಗತು. ಆದರೆ ಬ್ರಾಹ್ಮಣರ ವಿಷಯಕ್ಕೆ ಬಂದರೆ ಈ ಯುಪಿ (ಉತ್ತರ ಪ್ರದೇಶ) ಮತ್ತು ಉತ್ತರಾಖಂಡಗಳ ಬ್ರಾಹ್ಮಣರ ಪದ್ದತಿ.. ಆಚಾರ ವಿಚಾರಗಳಲ್ಲಿ ಅಲ್ಪ ಸಲ್ಪ ವ್ಯತ್ಯಾಸ ಕಂಡರೂವ ಅವರ ಹಾವ ಭಾವ ಮತ್ತು ದೇಹಭಾಷೆ (Body language) ನಮಗೆ ಸಮಾನತೆ ಇದ್ದಿಕ್ಕ ಹೇಳೂ ಸಂಶಯ ಹುಟ್ಟಿಸೂದೂ ಸುಳ್ಳಲ್ಲ ಮತೇ.
 
   ದಿಲ್ಲಿಯಲ್ಲಿ ಸಾಮಾನ್ಯವಾಗಿ ಪಂಜಾಬಿ ಹರಿಯಾಣಿಗಳೇ ತುಂಬಕಂಡು....ಪಂಜಾಬೀ ಪ್ರೇರಿತ ಭಾಷೆ ಇದ್ದರೂವಾ ಪ್ರತೀ ವಸತಿ ಸಂಕೀರ್ಣ ಮತ್ತು ಬ್ಲಾಕಿನಲ್ಲೂ ಕನಿಷ್ಠ ವ೦ದು ಮಂದಿರ ಸರ್ವೇ ಸಾಮಾನ್ಯವಾಗಿ ಇರತು - ಇದ್ದು ಹೇಳುದು ನ೦ಗಳ ಪೂರ್ವಾರ್ಜಿತ ಪುಣ್ಯ ಫಲವೇ ಆಗಿರವು. ಸಾಮಾನ್ಯವಾಗಿ ಇಪ್ಪವು ಪಂಜಾಬಿಗಳೇ ಆದರೂ ಮಂದಿರ ಮಾಡಿದಷ್ಟು ಸಲೀಸಾಗಿ - ಸುಲಭವಾಗಿ ಗುರುದ್ವಾರ ಮಾಡಲಾಗತಿಲ್ಲೆ ಹೇಳ ಕಾರಣಕ್ಕ ಏನ... ದಿಲ್ಲಿ ಸರಕಾರ ಪ್ರತೀ ಬ್ಲಾಕಲ್ಲಿ ವಂದಾದರೂ ಮಂದಿರ ಇರವು ಹೇಳಿ ಕಾಯದೆ ಮಾಡಿಟ್ಟಿದ್ದು ಬಹುಶಃ. ಈ ಪಂಜಾಬಿಗಳಿಗೆ ಅದರಲ್ಲೂ ಪಂಜಾಬೀ ಹೆಂಗಸರಿಗೆ ಮಂದಿರದ ಮೇಲೆ ಶೃದ್ಧೆ ಹೇಳದಕಿಂತವ ದೈತ್ಯಾಕಾರದ ಮೈ ಹೊತಗಂಡು ದೂರದಲ್ಲಿಪ್ಪ ಗುರುದ್ವಾರಕ್ಕೆ ಹೋಗಿ ’ಮಾಥಾ ಟೇಕ’ದಕ್ಕಿಂತ*  ಹತ್ತಿರದಲ್ಲೇ ಇಪ್ಪ ಮಂದಿರಕ್ಕೆ ಹೋಪದು ಸಸಾರ ಹೇಳೇ ಮಂದಿರ ದರ್ಶನ ಮಾಡತವನ ಹೇಳುದು ನನ್ನ ತರ್ಕ. ತರ್ಕ ತಪ್ಪೂ ಆಗಿರಲಕ್ಕು ಮತ್ತೇ !

ನಮ್ಮ ಬ್ಲಾಕಿನ ಮಂದಿರಕ್ಕೆ ಪದೇ ಪದೇ ನಿಯಮಿತವಾಗಿ ಹೋಪದು ನಂಗಕೆ ರೂಢಿ ಆತು. ಸಾಮಾನ್ಯವಾಗಿ ಉತ್ತರ ಭಾರತದ ಮಂದಿರದಲ್ಲಿ ದೇವರ ಮೂರ್ತಿ ಬಣ್ಣ ಬಣ್ಣದ ಬೊಂಬೆಗಳ ಹಾಂಗೇ (ನಂಬದೀ ಮಾಸ್ತಿ ಮನೆಯ ಹಾಂಗೆ) ಅಮೃತಶಿಲೆಗಳಿಂದ ಮಾಡಿದ್ದಾದರೂವ ಈ ಶನಿ ಮಹಾತ್ಮನ ಮೂರ್ತಿ ಮಾತ್ರ ಕಪ್ಪು... ಅಥವ ಕಪ್ಪು ಶಿಲೆಯಿಂದ ಮಾಡಿದ್ದೇ ಇರತು. ಮತ್ತೇ ಈ ಶನಿಗೆ ಭಕ್ತಮಹಾಜನ ಎಣ್ಣೆ ಹಚ್ಚತ.. ಬೆಲ್ಲ ಮುಕ್ಕಿಸ್ತ. ’ಚೇ ಸುಮ್ ಸುಮ್ಮನೇ ಆ ದೇವರ ಮೂರ್ತಿಗೆ ಯೆಣ್ಣೆ ಗಿಣ್ಣೆ ಹಚ್ಚಿ ಹೊಲಸು ಮಾಡತ್ವಲೀ’ ಹೇಳಿ ಮನಸಲ್ಲೂ ಇತ್ತು. ಹನುಮಂತನ ಮೂರ್ತಿ ಯಾವ ಕಲ್ಲಿಂದ ಮಾಡಿದ್ದ ಏನ... ಮೂರ್ತಿ ಮಾತ್ರ ಕುಂಕುಮದ (ಸಿಂಧೂರದ) ಬಣ್ಣ.. ಇದ್ ಎರಡೂ ವಿಷಯ ಹೀ೦ಗ್ ವಿಭಿನ್ನ ಎಂತಕೆ ಹೇಳಿ ಕುತೂಹಲ ಯಂಗೆ.

ವಂದಿನ ನಾನು ಹೊಸ ಬೈಕ್ ತಗಂಡು ಪೂಜೆ ಮಾಡಸವು ಹೇಳಿ ಹೋಗಿ ಪೂಜೆ ಮಾಡಸಗ೦ಡು ಚಿಲ್ಲರೆ ಇಲ್ಲದೇಯ ೧೦೦ ರೂಪಾಯಿಯ ನೋಟನೇ ದಕ್ಷಿಣೆ ಹೇಳಿ ಕೊಟ್ಟಿದಿದ್ನ ಇಲ್ಯ... ಆ ಯುಪಿಯ ಪಂಡಿತ್ ಜೀಗೆ ವನ್ನಮನಿ ನಂಗ ಅಂದ್ರೆ ಖುಷಿ.   ಪಂಡಿತ್ ಜೀಗೆ ಇಲ್ಲಿ ವಂದು ಪೂಜೆಗೆ ೧೦ ರಿಂದ ೨೦ ರೂಪಾಯಿ ಕೊಟ್ಟರೆ ಹೆಚ್ಚು ಬಿಲ. ಅದೇ ಕಾರಣಕ್ಕೆ ಇಲ್ಲಿನ ಭಟ್ಟರು ನಂಬದಿಯ ಭಟ್ಟರಾಂಗೇ ಸ್ಕೂಟರಲ್ಲಿ ಬಪ್ಪಷ್ಟು ಅನುಕೂಲಸ್ತರಲ್ಲ. ಪ್ರಸಾದ ಕೊಡೂದಿದ್ದರೂ ನಂಗಳನ್ನೇ ಹುಡುಕಿ ಸಲ್ಪ ಜಾಸ್ತಿನೇ  ಕೊಡತಿದ್ರು. ವನಮನೀ ಸಲಗೆ ಆಗೋಗಿತ್ತಪಾ.. ಆ ಸಲಿಗೆ ಇದ್ದದ್ದರಿಂದ ಆ ದಿನ ಪಂಡೀತಜೀ ಹತ್ರ ’ಶನಿ ಯೆಂತಕೆ ಕಪ್ಪು?? ಯೆಂತಕೆ ಯೆಳ್ಳೆಣ್ಣೆ ಹಚ್ಚತ?? ಬೆಲ್ಲ ಮುಕ್ಕಿಸ್ತ ?? ಹನಮಂತ ಯೆಂತಕೆ ಕೆಂಪ? ಸಿಂಧೂರದ ಬಣ್ಣ?? ಶನಿವಾರ ಯೆಂತಕೆ ಹನುಮಂತನ ಪೂಜೆ ಮಾಡತ??ಏಸಾ ಕ್ಯೋಂ?’ ಹೇಳಿ ಕೇಳಿದಿದ್ದೆ.

ಪಂಡಿತಜೀಯ ಹೇಳಿದ ಆ ವನಮನೀ ನಂಬಿಕೆಯ ಮೂಲಕಥೆಯೇ ಈ ಕೂಸಿಗೆ ಎರಡೆರಡು ಕಥೆಯಾತು ರಾತ್ರಪಾಗ.



ವಂದ್ ಸಲವಾ  ಶನಿ ಮಹಾರಾಜ ಜನಕ್ಕೆ ಸುಮ್ಮಸುಮ್ಮನೇ ಭಯಂಕರ ತ್ರಾಸ್ ಕೊಡತ ಇದ್ದಿದ್ನಡ. ತ್ರಾಸು ಕೊಡೂದೇ ಅವನ ಕೆಲಸ. ಸಾಮಾನ್ಯ ಎಲ್ಲ ಜನಕ್ಕೂ ಶನಿ ಹಿಡದೋತು. ಎಲ್ಲ ಕಂಗಾಲಾಗೋದವಡ. ಯೆಲ್ಲ ಅವರವರ ಭಕ್ತಿಗೆ ತಕ್ಕಾಂಗೇ ಪೂಜೆ ಮಾಡುಲೆ ಹಣಕದ್ವಡ. ಯಾವ ದೇವರ ಮಾತೂ ಕೇಳಿದ್ನಿಲ್ಲೆ ಶನಿ ದೇವ. 

ಆವಾಗ ಜನ ಎಲ್ಲ ಹೋಗಿ ಹನುಮಂತನ ಹತ್ರ ಕಷ್ಟ ಹೇಳಕಂಡು ತೀಡದ್ವಡ. ಹನುಮಂತಂಗೆ ಜನರ ಕಷ್ಟ ನೋಡಿ ಪಾಪ ಅನಿಸ್ತಡ. ಗಧೆ ಹಿಡಕಂಡು ಬಾಯಿ ಉಬ್ಬಿಸಗಂಡು ಹೊಂಟೇಬುಟ್ನಡ. ಹೋಗಿ ಶನಿಗೆ ಯಗ್ಗಾ ಮುಗ್ಗಾ ಹೊಡದ್ನಡ. ಇನ್ನೇನು ಶನಿ ಪಾಪ ಹನಮಂತ ಹೊಡೆದರೆ ಕೇಳವ...ಎದಕಂಬಲೂ ಆಗದೇ ’ತಪ್ಪಾತೋ ಮಾರಾಯ.. ಹನಮಾ... ಯೆಂತಕೆ ಹೊಡೆತಿದ್ದೆ ಹೇಳಿ ಹೇಳಕಂಡಾರೂ ಹೊಡೆಯ’ ಅಂದ್ನಡ.


’ನೀನು ಪಾಪದ ಜನಕ್ಕೆ ಯೆಂತಕೆ ತ್ರಾಸ್ ಕೊಡತ್ಯ? ಶನಿ ಹಿಡೀತೆ? ಇನ್ನು ಮುಂದೆ ಮತ್ತೆ ಶನಿ ಹಿಡದ್ರೆ ನಿಂಗೆ ಶನಿ ಬಿಡ್ಸ್-ಬಿಡವೆ.... ಹುಶಾರ್’ ಹೇಳಿ ಧಮಕಿ ಕೊಟನಡ. 

ಪಾಪ ಶನಿ ಹೆದರಕಂಡು.. ’ಥೋ ತಪ್ಪಾತೋ ಮಾರಾಯ. ಇನ್ನು ಮುಂದೆ ಯಾರಿಗೂ ಸುಮ್ ಸುಮ್ಮನೇ ಎಲ್ಲ ತ್ರಾಸ್ ಕೊಡತ್ನಿಲ್ಲೆ .. ಅದೂ ನಿನ್ನ ಭಕ್ತರಿಗೆ ಮಾತ್ರ ಕಣ್ಣೆತ್ತೂ ನೋಡತ್ನಿಲ್ಲೆ.... ಯಂಗೆ ಹೊಡೆಯಡ... ತಪ್ಪಾತು ಆಂಜನೇಯ’ ಹೇಳಿ ಹನಮಂತನ ಕಾಲಿಗೆ ಬಿದ್ನಡ. 

’ಸರಿ ಬದಕ್ಕ ಹೋಗು’ ಹೇಳಿ ಹನುಮಂತ ಹೊಂಟನಡ. ಆವಾಗ ಶನಿ ಮಹಾರಾಜ ಹನಮಂತನ ಕಾಲು ಹಿಡಕಂಡು- ’ಮಾರಾಯ ನೀ ಯೇನೋ ಯಂಗೆ ಹೊಡದುಬುಟೆ .. ಈಗ ಯನ್ನ ಮೈಯಲ್ಲಾದ ಗಾಯ ಗುಣಮಾಡವ್ವು ಯಾರು? ರಕ್ತ ಬ್ಯಾರೆ ಬತ್ತಿದ್ದು’ ಹೇಳಿ ಗೋಳೋ ಹೇಳಿ ತೀಡುಲೆ ಹಿಡದ್ನಡ.


ಆವಾಗ ಹನುಮಂತ ಶನಿದೇವಂಗೆ ವಂದು ವರ ಕೊಟನಡ... ’ಇವತ್ತಿಂದ ಯಾರು ನಿನ್ನ ಮೈಗೆ ಎಣ್ಣೆ ಹಚ್ಚಿ ನಿಂಗೆ ಬೆಲ್ಲ ತಿನ್ನಿಸ್-ತ್ವೋ ಅವಕೆ ನೀ ಕಾಡೂಲಾಗ.. ತ್ರಾಸು ಕೊಡುಲಾಗ... ಹೆದರಡ ಕಮ್ಮಿ ಆಗತು’ ಹೇಳಿ. 

ಅದಕೇಯ ಆವತ್ತಿಂದವಾ ಪ್ರತೀ ಶನಿವಾರ (ಶನಿಯ ದಿನ) ಶನಿ ದೇವರಿಗೆ ಎಣ್ಣೆ ಹಚ್ಚಿ ಬೆಲ್ಲ ತಿನ್ನಸಿ ಅವಂಗೆ ಖುಷಿಪಡಿಸ್ತ ಜನ. ಮತೇ ಹನಮಂತಂಗೆ ಶನಿ ಹೆದರತ ಹೇಳಿ ಹನಮಂತನ ಪೂಜೆನೂ ಮಾಡತ.. ಕೈ ಮುಗಿತ. 

(ನಿದ್ದೆ ಬಂದೋಗಿತ್ತು ಅಷ್ಟೊತ್ತಿಗೆ)

*ಮಾಥಾ ಟೇಕನಾ - ಕೈ ಮುಗಿಯುವುದು, ದೇವರಿಗೆ ಅಥವ ಸಾಮಾನ್ಯವಾಗಿ ಗುರುದ್ವಾರದಲ್ಲಿ ಮಂಡಿಯೂರಿ ಹಣೆಯನ್ನ ನೆಲಕ್ಕೆ ಜಪ್ಪುವ ಪದ್ದತಿ, ನೆಲಕ್ಕೆ ಹಣೆ ಜಪಗಂಬದು, to bow,

3 comments:

  1. ಓಹೋ ... ಇದು ಅಲ್ಲಿ ಭಟ್ರು ಹೇಳಿದ ಕಥೆನ :) ಗೊತ್ತಿತ್ತಿಲ್ಲೆ.. ನೀನೇ ಕಟ್ಟಿದ್ದು ಮಾಡಿದ್ದಿ

    ReplyDelete
  2. ಮಜಾ ಇದ್ದೋ ! ಆದ್ರೂವ ಶನಿ ಎಂತಕ್ ಕರೀಕಿದ್ದ ಹೇಳಿ ಹೇಳಿದ್ದೆ ಇಲ್ಯಲಾ ?

    ReplyDelete
  3. ಹಹಹಾ... ಕೂಸಿನ ಕುತೂಹಲ ಆತಲೇ ನಿಂದು!!
    ನಿನ್ನ ಗಮನಕ್ಕೆ - ಪದೇ ಪದೇ ವಿಪರಿಮಿತ ಪೆಟ್ಟು ಬಿದ್ದರೆ ಆ ಜಾಗ ಕಪ್ಪಾಗತು ಹದಾ ?

    ReplyDelete