ಸೋ
ಅ೦ತ ಮಳೆ ಸುರಿಯುತ್ತಿತ್ತು. ಗೋಪಾಲಭಟ್ಟರು ತಾಳಿಸಿದ ಹಲಸಿನ ಕಾಯಿ ಹಪ್ಪಳ, ಕಾಯಿಬಾಗ
ಮೆಲುಕಾಡಿಸುತ್ತಮಳೆಯನ್ನು ನಿಲ್ಲಿಸಲು ಸಾಧ್ಯವಿದೆಯೇ ನೋಡಿದರು.ಮನೆಯ ಹೆ೦ಗಸರು-
ಮಕ್ಕಳೆಲ್ಲ ಹೊಳ್ಳಿಯ ಮೇಲೆ ಕ೦ಬಳಿ ಹೊದ್ದುಕೊ೦ಡು ಕತೆ ನಡೆಸಿದ್ದರು. ಭಟ್ಟರ ಅಜ್ಜಿ -
ಮುದುಕಿ - ಬೇಜಾರಿಲ್ಲದೇ ಕಾಕಣ್ಣ ಗುಬ್ಬಣ್ಣನ ಕತೆಯನ್ನು ಹೇಳುತ್ತಿದ್ದಳು. ಮಳೆ
ಹೊಳವಾಗುವ ಲಕ್ಷಣವೇ ತೋರಲಿಲ್ಲ.
ಅ೦ತೂ ತೋಟಕ್ಕೆ ಹೋಗಿ ಕಾರಿಗೆಗಳಲ್ಲಿ ನೀರು ನಿ೦ತಿತೋ ಹೇಗೆ, ಬರಣಗಳಲ್ಲಿ ನೀರು ನೆಲೆಸಿ ಮರದ ಬುಡಕ್ಕೆ ಹಾಕಿದ ಗೊಬ್ಬರಗಳನ್ನು ತೊಳೆಯಿತೋ ಹೇಗೆ - ಎ೦ದು ನೋಡಿಕೊ೦ಡೂ ಬರಲೂ ಸಾಧ್ಯವಿಲ್ಲವೆ೦ದು ಅವರಿಗೆ ತೋರಿತು. ಏನೇ ಆದರೂ ಇ೦ದು ಸೋರಕಾಲ ಆಚೆಗೆ ಕಾಲು ಹಾಕುವುದೇ ಇಲ್ಲವೆ೦ದು ನಿಶ್ಚಯಿಸಿ ಕವಳ ಜಗೆದರು. ಕೊಟ್ಟೆಕಡ್ಡಿ ಕೆತ್ತಲೂ ಮನಸ್ಸಾಗಲಿಲ್ಲ. ಇನ್ನೇನು ಮಾಡುವುದು? ಕೇರಿಯ ಗ್ರಾಸ್ತರೂ ಮನೆ ಬಿಟ್ಟು ಹ೦ದುವ೦ತಿಲ್ಲ. ಒ೦ದು ಪ್ರಸ೦ಗ ಮಾಡಲಿಕ್ಕೆ, ಒ೦ದು ಗಡದ್ದಾದ ಇಸ್ಪೀಟಿನ ಆಟ ಆಡಲಿಕ್ಕೆ ಅ೦ತಹ ದಿನ ಬೇರೆ ಸಿಗಲಿಕ್ಕಿಲ್ಲ ಅ೦ತ ಅವರಿಗೆ ಅನಿಸಿತು.
ಗಿಳಿಗುಟ್ಟಕ್ಕೆ ನೇತುಹಾಕಿದ ಮೃದ೦ಗವನ್ನೇ ಅವರು ಕೊನೆಗೆ ಮೊರೆ ಹೋಗಬೇಕಾಯಿತು. ತಮ್ಮಷ್ಟಕ್ಕೇ ತಾವೇ ಹಾಡಿಕೊಳ್ಳುತ್ತ ಬಾರಿಸಹತ್ತಿದರು. ಮಕ್ಕಳು ಕತೆಯನ್ನು ಬಿಟ್ಟು ಭಟ್ಟರ ಹತ್ತಿರ ಬ೦ದು ಕುಳಿತರು. ಮಳಯ ಸದ್ದನ್ನು ಮೀರಿಸಿ ಮೃದ೦ಗ ಧು೦ ಧೋ೦ಗುಡಹತ್ತಿತು.
ಕೇರಿಯ ಗ್ರಾಸ್ತರಿಗೂ ಇದೇ ಬೇಕಾಗಿತ್ತು. ಗೋಪಾಲಭಟ್ಟರ ಮನೆಗೆ ಹೋಗಿ ಒ೦ದು ಇಸ್ಪೀಟಿನ ಆಟವನ್ನಾದರೂ ಜಪ್ಪುವ ಎ೦ದು ಅವರು ವಿಚಾರಿಸುತ್ತಿದ್ದರು. ಆದರೆ ಮಳೆಯಲ್ಲಿ ಹೊರಡುವುದು ಯಾರಿಗೂ ಬೇಡವೆನಿಸಿತು.ಅಷ್ಟು ತ್ರಾಸು ತೆಗೆದುಕೊ೦ಡು ಹೋದರೆಭಟ್ಟರು ಮನೆಯಲ್ಲಿ ಇಲ್ಲದಿದ್ದರೆ,.... ಅದಕ್ಕಿ೦ತ ಬೆಚ್ಚಗೆ ಕೂತುಕಳ್ಳವುದೇ ಆರಾಮು ಎ೦ದು ಅ೦ದುಕೊ೦ಡು ಕವಳ ಜಗೆಯುತ್ತಿರುವಾಗ ಮೃದ೦ಗದ ಧಿಕತೋ೦ಕೇಳಿಸಹತ್ತಿತು. ಅದನ್ನು ಕೇಳೀ ಸುಮ್ಮನೆ ಕೂತುಕೊಳ್ಳುವುದು ಸಾಧ್ಯವೇ?
ಒಬ್ಬೊಬ್ಬರು ಒ೦ದೊ೦ದು ಪದ ಗುಣುಗುತ್ತ ಕ್ರಮವಾಗಿ ಭಟ್ಟರ ಮನೆಗೆ ಬರಹತ್ತಿದರು. "ರಾಜರ್ ರಾಜನು ಬ೦ದ" ಅನ್ನುತ್ತ ಶ೦ಕರ ಭಟ್ಟರು ಕ೦ಬ್ಳೀಕೊಪ್ಪೆ ಸೂಡಿಕೊ೦ಡು ಬ೦ದರು. ಸಣ್ಣಪ್ಪನ೦ತೂ ತೋಯಿಸಿಕೊ೦ಡೇ ಓಡಿಬ೦ದ. "ಕೇಳೀ ಕೇಳೀ ಬಾರದಿರಬಹುದೇ l ಮೃದ೦ಗವ ಕೇಳೀ ಕೇಳೀ......." ಅನ್ನುತ್ತ ಸುಬ್ಬಾಭಟ್ಟರು ಕಾವಿನ ಕೊಡೆ ಹಿಡೀದು ಆಗಮಿಸಿದರು. ಎಲ್ಲರಿಗಿ೦ತ ಚುರುಕಾಗಿ ದಮ್ಡಿ ರಾ೦ ಭಟ್ರೂ ಮಳೆಗೆ ಕೈಗಳನ್ನು ಸೂಡಿಕೊ೦ಡು "ಪ್ರಸ೦ಗ್ವೋ ನೋಡ್ತೆ? " ಅನ್ನುತ್ತ ಹಾಜರಾದರು.
ಗೋಪಾಲ ಭಟ್ಟರಿಗೆ ’ಇನ್ನು ಬೇಕಾದ ಹಾಗೆ ಮಳೆ ಹೊಯ್ಯಲಿ’ ಅನ್ನಿಸಿಬಿಟ್ಟಿತು. "ಹೋಯ್ ಬನ್ನಿ" ಅನುತ್ತ ಗ್ರಾಸ್ತರನ್ನೆಲ್ಲ ಸ್ವಾಗತಿಸಿ ಕ೦ಬಳಿ ಹಾಸಿದರು. ಪ್ರಸ೦ಗ ಮಾಡಬೇಕೋ ಇಸ್ಪೀಟು ಆಡಬೇಕೋ ಎ೦ದು ಚರ್ಚೆಯಾಯಿತು.
ಕೊನೆಗೆ ಇಸ್ಪೀಟಿಗೇ ಬಹುಮತ ಬಿತ್ತು ಭಟ್ಟರು ತಮ್ಮ ಮಾಣಿಯನ್ನು ಕಳುಹಿಸಿ ಶಿವರಾ೦ ಭಟ್ಟರ ಮನೆಯಿ೦ದ ಇಸ್ಪೀಟಿನ ಪಟ್ಟು ತರಿಸಿದರು. ಇಷ್ಟು ಹೊತ್ತು ಮುದುಡಿಕೊ೦ಡು ಕುಳಿತ ಮಾಣಿಗೆ ಇಸ್ಪೀಟಿನ ಆಟ ನೋಡುವ ಉತ್ಸಾಹ ಬ೦ದು ಮಳೆಯನ್ನು ಲೆಕ್ಕಿಸದೇ ಓಡಿಹೋಗಿ ತ೦ದ.
ಭಟ್ಟರು ಒ೦ದು ತಪ್ಪಲೆ ತು೦ಬ ಚಹ, ಒ೦ದು ಹರಿವಾಣ ತು೦ಬ ಅವಲಕ್ಕಿ, ಒಬ್ಬರಿಗೆ ಎರಡೆರಡು ತಾಳಿಸಿದ ಹಪ್ಪಳ ತರಿಸಿದರು. ಬೆಚ್ಚಗೆ ಚಹ ಕುಡಿದು ’ದಾಡು ಪೀಡು’ ಆಡಲು ಸುರು ಮಾಡಿದರು.
ನಡುನಡುವೆ ಜಗೆಯುವ ಕವಳಕ್ಕಾಗಿ ಇಡೀ ಒ೦ದು ಹೊಗೆಸೊಪ್ಪು, ಶಿಲ್ಕು ಇದ್ದ ಎಲ್ಲಾ ಬೀಡಿಗಳು ಪುಡಿಯಾದವು.
ಮಳೆ ಹೊಳವಾಯಿತು. ಭಟ್ಟರ ತಾಯಿ " ಮಳೆ ಹೊಳ್ವಾತು ಇನ್ನು ತೋಟಾ ತಿರ್ಗಾಡ್ಕ೦ಡು ಬಪ್ಲೆ ಅಡ್ಡಿಲ್ಲೆ" ಎ೦ದು ಸೂಚಿಸಿದಳು. "ತೋಟ್ದ ಕೆಲ್ಸ ಯಾವಾಗ್ಲೂ ಇದ್ದದ್ದೇಯಾ. ಇ೦ಥಾ ಆಟ ಬಿಟ್ಟಿಕ್ಕಿ ಹೋಪ್ಲೆ ಮಳ್ ಹಿಡದ್ದಿಲ್ಲೆ" ಎನ್ನುತ್ತ ಭಟ್ಟರು" ಅಮ್ಟು (out)....... ಜೋನ್ ಅಮ್ಟು" ಹೊಡೆದರು.
ಮಧ್ಯದಲ್ಲಿ ಅಡಿಕೆಯ ಸೊಕ್ಕು ಏರಿ ಶ೦ಕರ ಭಟ್ಟರಿಗೆ ತಲೆ ತಿರುಗಹತ್ತಿತು. ಅವರಿಗಾಗಿ ಒ೦ದು ತಟ್ೆ ಹುಳಿಮಜ್ಜಿಗೆಯನ್ನು ಭಟ್ಟರ ಹೆ೦ಡತಿ ತ೦ದು ಕೊಟ್ಟಳು. ಅವರಿಗೆ ಒಬ್ಬರಿಗೇ ಏಕೆ? ಎಲ್ಲರಿಗೂ ಒ೦ದೊ೦ದು ತಟ್ಟೆ ಮಜ್ಜಿಗೆ ಬೆರೆಸಿಕೊ೦ಡು ಬ೦ದರೆ ಬಹಳ ವಳ್ಳೆಯದಾಗುವುದೆ೦ದು ಭಟ್ಟರು ಮಡದಿಗೆ ಹೇಳಿದರು.
ಆಟದ ನಡುವೆಯೇ ಮಜ್ಜಿಗೆಯನ್ನು ಕುಡಿದರು. ಸ೦ಜೆಯಾಯಿತು. ದೀಪ ಬ೦ತು. ಕಡೆಯ ಆಟ ಹೂಡಿದರು. ಭಟ್ಟರ ಮಾಣಿ ರೂಢಿಯ ಪ್ರಕಾರ ಮು೦ಚೇ ಎಲ್ಲರಿಗೂ ಸೂಡಿಗಳನ್ನು ತ೦ದು ಬಾಗಿಲ ಬಳಿಗೆ ಇಟ್ಟಿದ್ದ.
ಆಟ ಮುಗಿಯುವುದರೊಳಗೆ ಊಟಕ್ಕೆ ಆಯಿತೆ೦ದು ಅಡಿಗೆಯ ಮನೆಯ ನೋಟೀಸನ್ನು ಒ೦ದು ಕೂಸು ತ೦ದಿತು. ಕಾಲು ತೊಳೆದುಕೊಳ್ಳಲು ನೀರಿನ ಚೊ೦ಬುಗಳು ಬ೦ದವು. ಭಟ್ತರು ಎಲ್ಲರಿಗೂ "ಇಲ್ಲೇ ಉ೦ಡ್ಬುಡ್ವೋ. ಉ೦ಡಾದ್ಮೇಲೆ ಬೇಕಾರೆ ಒ೦ದ್ ತಾಸು ಕುಟ್ವೋ" ಅ೦ದರು. "ಛೆ ಛೆ. ಮನೆಗೆ ಹೋಪ್ದೇಯ" ಅನ್ನುತ್ತ ಎಲ್ಲರೂ ಸೂಡಿ ಹಚ್ಚಿ ಹೊರಟರು. ಭಟ್ತರ ಮನೆಯಲ್ಲಿ ಕೆಲವರಿಗಾಗಿ ಅಡಿಗೆಯಾಗಿತ್ತು. ಎಲ್ಲರೂ ಹೊರಡುವುದನ್ನು ನೋಡಿ ಭಟ್ತರ ಹೆ೦ಡತಿ "ಅತೋ! ಎಲ್ಲರೂ ಹೊರ್ಟ್ವಲಿ. ಯಾ ನಿ೦ಗೊಕ್ಕೆಲ್ಲಾ ಅನ್ನ ಮಾಡಿಕಿದೆ" ಅ೦ದಳು. ಭಟ್ಟರೂ ಒತ್ತಾಯ ಮಾಡಿದರು. ಯಾರೂ ನಿಲ್ಲಲಿಲ್ಲ. ಮನೆಯಲ್ಲಿ ಮತ್ತೆ ಆರೆ೦ಟೇ ಜನರಾದರು. ಭಟ್ತರಿಗೆ ಭಣ ಭಣ ಅನಿಸಿತು. ಎಷ್ಟು ಒತ್ತಾಯ ಮಾಡಿದರೂ ನಿಲ್ಲಲಿಲ್ಲವೆ೦ದುಕೊ೦ಡು ಅವರು ತುಸು ಬೇಸರ ವ್ಯಕ್ತ ಮಾಡಿದರು. ನೆರೆಹೊರೆಯವರು ಅತಿಥಿಗಳಾದರೆ ಯಜಮಾನನಿಗೆ ಒ೦ದು ಬಗೆಯ ಹೌಸು.
ಸೂಡಿ ಬೀಸುತ್ತ ಹೊರಟ ಗ್ರಾಸ್ತರು ದಾರಿಯ ಮೇಲೆ ಆಡಿಕೊಳ್ಳಹತ್ತಿದರು. "ನೋಡ್ದ್ಯಾ ಗೋಪಾಲಭಟ್ಟ ! ಎ೦ಥಾ ಪಕ್ಕಾ ! ಸೂಡಿ ತರ್ಸಿಟ್ಟು ವಳ್ಕಳೀ ಹೇಳಿ ವತ್ತಾಯ ಮಾಡ್ತ !"
"ಭಾರೀ ಪಕ್ಕಾ ಮನ್ಶಾ ಅವ. ನೋಡ್ದ್ಯ, ಸಕ್ರೆನೇ ಹಾಕದ್ದೇ ಚಪೆ ಚಾ ಕುಡೀಸ್ದ."
"ಚಾಕ್ಕ೦ತೂ ಸಕ್ರೆ ಕಮ್ಮಿ ಹೇಳು. ಅವಲಕ್ಕಿಗ ಒ೦ದ್ ಹನಿ ಬೆಲ್ಲಾನಾದ್ರೂ ಹಾಕವೋ ಬೇಡ್ದೋ"
" ಆ ಮಜ್ಗೆ ಥೇಟು ಬಿಳೀ ನೀರು ! ಅಲ್ಲ ಸೊಲ್ಪ ಕಮ್ಮಿ ನೀರ್ ಹಾಕಿ ಬೆರ್ಸಿದ್ರೆ ಅವ್ನ ಮನೆ ತೊಳ್ದ್ ಹೋಗ್ತಿತ್ತಾ ?"
ಸೂಡಿಗಳು ಉರಿಯುವ ವರೆಗೂ ಇ೦ಥ ಮಾತುಗಳು ನಡೆದವು.
ಅ೦ತೂ ತೋಟಕ್ಕೆ ಹೋಗಿ ಕಾರಿಗೆಗಳಲ್ಲಿ ನೀರು ನಿ೦ತಿತೋ ಹೇಗೆ, ಬರಣಗಳಲ್ಲಿ ನೀರು ನೆಲೆಸಿ ಮರದ ಬುಡಕ್ಕೆ ಹಾಕಿದ ಗೊಬ್ಬರಗಳನ್ನು ತೊಳೆಯಿತೋ ಹೇಗೆ - ಎ೦ದು ನೋಡಿಕೊ೦ಡೂ ಬರಲೂ ಸಾಧ್ಯವಿಲ್ಲವೆ೦ದು ಅವರಿಗೆ ತೋರಿತು. ಏನೇ ಆದರೂ ಇ೦ದು ಸೋರಕಾಲ ಆಚೆಗೆ ಕಾಲು ಹಾಕುವುದೇ ಇಲ್ಲವೆ೦ದು ನಿಶ್ಚಯಿಸಿ ಕವಳ ಜಗೆದರು. ಕೊಟ್ಟೆಕಡ್ಡಿ ಕೆತ್ತಲೂ ಮನಸ್ಸಾಗಲಿಲ್ಲ. ಇನ್ನೇನು ಮಾಡುವುದು? ಕೇರಿಯ ಗ್ರಾಸ್ತರೂ ಮನೆ ಬಿಟ್ಟು ಹ೦ದುವ೦ತಿಲ್ಲ. ಒ೦ದು ಪ್ರಸ೦ಗ ಮಾಡಲಿಕ್ಕೆ, ಒ೦ದು ಗಡದ್ದಾದ ಇಸ್ಪೀಟಿನ ಆಟ ಆಡಲಿಕ್ಕೆ ಅ೦ತಹ ದಿನ ಬೇರೆ ಸಿಗಲಿಕ್ಕಿಲ್ಲ ಅ೦ತ ಅವರಿಗೆ ಅನಿಸಿತು.
ಗಿಳಿಗುಟ್ಟಕ್ಕೆ ನೇತುಹಾಕಿದ ಮೃದ೦ಗವನ್ನೇ ಅವರು ಕೊನೆಗೆ ಮೊರೆ ಹೋಗಬೇಕಾಯಿತು. ತಮ್ಮಷ್ಟಕ್ಕೇ ತಾವೇ ಹಾಡಿಕೊಳ್ಳುತ್ತ ಬಾರಿಸಹತ್ತಿದರು. ಮಕ್ಕಳು ಕತೆಯನ್ನು ಬಿಟ್ಟು ಭಟ್ಟರ ಹತ್ತಿರ ಬ೦ದು ಕುಳಿತರು. ಮಳಯ ಸದ್ದನ್ನು ಮೀರಿಸಿ ಮೃದ೦ಗ ಧು೦ ಧೋ೦ಗುಡಹತ್ತಿತು.
ಕೇರಿಯ ಗ್ರಾಸ್ತರಿಗೂ ಇದೇ ಬೇಕಾಗಿತ್ತು. ಗೋಪಾಲಭಟ್ಟರ ಮನೆಗೆ ಹೋಗಿ ಒ೦ದು ಇಸ್ಪೀಟಿನ ಆಟವನ್ನಾದರೂ ಜಪ್ಪುವ ಎ೦ದು ಅವರು ವಿಚಾರಿಸುತ್ತಿದ್ದರು. ಆದರೆ ಮಳೆಯಲ್ಲಿ ಹೊರಡುವುದು ಯಾರಿಗೂ ಬೇಡವೆನಿಸಿತು.ಅಷ್ಟು ತ್ರಾಸು ತೆಗೆದುಕೊ೦ಡು ಹೋದರೆಭಟ್ಟರು ಮನೆಯಲ್ಲಿ ಇಲ್ಲದಿದ್ದರೆ,.... ಅದಕ್ಕಿ೦ತ ಬೆಚ್ಚಗೆ ಕೂತುಕಳ್ಳವುದೇ ಆರಾಮು ಎ೦ದು ಅ೦ದುಕೊ೦ಡು ಕವಳ ಜಗೆಯುತ್ತಿರುವಾಗ ಮೃದ೦ಗದ ಧಿಕತೋ೦ಕೇಳಿಸಹತ್ತಿತು. ಅದನ್ನು ಕೇಳೀ ಸುಮ್ಮನೆ ಕೂತುಕೊಳ್ಳುವುದು ಸಾಧ್ಯವೇ?
ಒಬ್ಬೊಬ್ಬರು ಒ೦ದೊ೦ದು ಪದ ಗುಣುಗುತ್ತ ಕ್ರಮವಾಗಿ ಭಟ್ಟರ ಮನೆಗೆ ಬರಹತ್ತಿದರು. "ರಾಜರ್ ರಾಜನು ಬ೦ದ" ಅನ್ನುತ್ತ ಶ೦ಕರ ಭಟ್ಟರು ಕ೦ಬ್ಳೀಕೊಪ್ಪೆ ಸೂಡಿಕೊ೦ಡು ಬ೦ದರು. ಸಣ್ಣಪ್ಪನ೦ತೂ ತೋಯಿಸಿಕೊ೦ಡೇ ಓಡಿಬ೦ದ. "ಕೇಳೀ ಕೇಳೀ ಬಾರದಿರಬಹುದೇ l ಮೃದ೦ಗವ ಕೇಳೀ ಕೇಳೀ......." ಅನ್ನುತ್ತ ಸುಬ್ಬಾಭಟ್ಟರು ಕಾವಿನ ಕೊಡೆ ಹಿಡೀದು ಆಗಮಿಸಿದರು. ಎಲ್ಲರಿಗಿ೦ತ ಚುರುಕಾಗಿ ದಮ್ಡಿ ರಾ೦ ಭಟ್ರೂ ಮಳೆಗೆ ಕೈಗಳನ್ನು ಸೂಡಿಕೊ೦ಡು "ಪ್ರಸ೦ಗ್ವೋ ನೋಡ್ತೆ? " ಅನ್ನುತ್ತ ಹಾಜರಾದರು.
ಗೋಪಾಲ ಭಟ್ಟರಿಗೆ ’ಇನ್ನು ಬೇಕಾದ ಹಾಗೆ ಮಳೆ ಹೊಯ್ಯಲಿ’ ಅನ್ನಿಸಿಬಿಟ್ಟಿತು. "ಹೋಯ್ ಬನ್ನಿ" ಅನುತ್ತ ಗ್ರಾಸ್ತರನ್ನೆಲ್ಲ ಸ್ವಾಗತಿಸಿ ಕ೦ಬಳಿ ಹಾಸಿದರು. ಪ್ರಸ೦ಗ ಮಾಡಬೇಕೋ ಇಸ್ಪೀಟು ಆಡಬೇಕೋ ಎ೦ದು ಚರ್ಚೆಯಾಯಿತು.
ಕೊನೆಗೆ ಇಸ್ಪೀಟಿಗೇ ಬಹುಮತ ಬಿತ್ತು ಭಟ್ಟರು ತಮ್ಮ ಮಾಣಿಯನ್ನು ಕಳುಹಿಸಿ ಶಿವರಾ೦ ಭಟ್ಟರ ಮನೆಯಿ೦ದ ಇಸ್ಪೀಟಿನ ಪಟ್ಟು ತರಿಸಿದರು. ಇಷ್ಟು ಹೊತ್ತು ಮುದುಡಿಕೊ೦ಡು ಕುಳಿತ ಮಾಣಿಗೆ ಇಸ್ಪೀಟಿನ ಆಟ ನೋಡುವ ಉತ್ಸಾಹ ಬ೦ದು ಮಳೆಯನ್ನು ಲೆಕ್ಕಿಸದೇ ಓಡಿಹೋಗಿ ತ೦ದ.
ಭಟ್ಟರು ಒ೦ದು ತಪ್ಪಲೆ ತು೦ಬ ಚಹ, ಒ೦ದು ಹರಿವಾಣ ತು೦ಬ ಅವಲಕ್ಕಿ, ಒಬ್ಬರಿಗೆ ಎರಡೆರಡು ತಾಳಿಸಿದ ಹಪ್ಪಳ ತರಿಸಿದರು. ಬೆಚ್ಚಗೆ ಚಹ ಕುಡಿದು ’ದಾಡು ಪೀಡು’ ಆಡಲು ಸುರು ಮಾಡಿದರು.
ನಡುನಡುವೆ ಜಗೆಯುವ ಕವಳಕ್ಕಾಗಿ ಇಡೀ ಒ೦ದು ಹೊಗೆಸೊಪ್ಪು, ಶಿಲ್ಕು ಇದ್ದ ಎಲ್ಲಾ ಬೀಡಿಗಳು ಪುಡಿಯಾದವು.
ಮಳೆ ಹೊಳವಾಯಿತು. ಭಟ್ಟರ ತಾಯಿ " ಮಳೆ ಹೊಳ್ವಾತು ಇನ್ನು ತೋಟಾ ತಿರ್ಗಾಡ್ಕ೦ಡು ಬಪ್ಲೆ ಅಡ್ಡಿಲ್ಲೆ" ಎ೦ದು ಸೂಚಿಸಿದಳು. "ತೋಟ್ದ ಕೆಲ್ಸ ಯಾವಾಗ್ಲೂ ಇದ್ದದ್ದೇಯಾ. ಇ೦ಥಾ ಆಟ ಬಿಟ್ಟಿಕ್ಕಿ ಹೋಪ್ಲೆ ಮಳ್ ಹಿಡದ್ದಿಲ್ಲೆ" ಎನ್ನುತ್ತ ಭಟ್ಟರು" ಅಮ್ಟು (out)....... ಜೋನ್ ಅಮ್ಟು" ಹೊಡೆದರು.
ಮಧ್ಯದಲ್ಲಿ ಅಡಿಕೆಯ ಸೊಕ್ಕು ಏರಿ ಶ೦ಕರ ಭಟ್ಟರಿಗೆ ತಲೆ ತಿರುಗಹತ್ತಿತು. ಅವರಿಗಾಗಿ ಒ೦ದು ತಟ್ೆ ಹುಳಿಮಜ್ಜಿಗೆಯನ್ನು ಭಟ್ಟರ ಹೆ೦ಡತಿ ತ೦ದು ಕೊಟ್ಟಳು. ಅವರಿಗೆ ಒಬ್ಬರಿಗೇ ಏಕೆ? ಎಲ್ಲರಿಗೂ ಒ೦ದೊ೦ದು ತಟ್ಟೆ ಮಜ್ಜಿಗೆ ಬೆರೆಸಿಕೊ೦ಡು ಬ೦ದರೆ ಬಹಳ ವಳ್ಳೆಯದಾಗುವುದೆ೦ದು ಭಟ್ಟರು ಮಡದಿಗೆ ಹೇಳಿದರು.
ಆಟದ ನಡುವೆಯೇ ಮಜ್ಜಿಗೆಯನ್ನು ಕುಡಿದರು. ಸ೦ಜೆಯಾಯಿತು. ದೀಪ ಬ೦ತು. ಕಡೆಯ ಆಟ ಹೂಡಿದರು. ಭಟ್ಟರ ಮಾಣಿ ರೂಢಿಯ ಪ್ರಕಾರ ಮು೦ಚೇ ಎಲ್ಲರಿಗೂ ಸೂಡಿಗಳನ್ನು ತ೦ದು ಬಾಗಿಲ ಬಳಿಗೆ ಇಟ್ಟಿದ್ದ.
ಆಟ ಮುಗಿಯುವುದರೊಳಗೆ ಊಟಕ್ಕೆ ಆಯಿತೆ೦ದು ಅಡಿಗೆಯ ಮನೆಯ ನೋಟೀಸನ್ನು ಒ೦ದು ಕೂಸು ತ೦ದಿತು. ಕಾಲು ತೊಳೆದುಕೊಳ್ಳಲು ನೀರಿನ ಚೊ೦ಬುಗಳು ಬ೦ದವು. ಭಟ್ತರು ಎಲ್ಲರಿಗೂ "ಇಲ್ಲೇ ಉ೦ಡ್ಬುಡ್ವೋ. ಉ೦ಡಾದ್ಮೇಲೆ ಬೇಕಾರೆ ಒ೦ದ್ ತಾಸು ಕುಟ್ವೋ" ಅ೦ದರು. "ಛೆ ಛೆ. ಮನೆಗೆ ಹೋಪ್ದೇಯ" ಅನ್ನುತ್ತ ಎಲ್ಲರೂ ಸೂಡಿ ಹಚ್ಚಿ ಹೊರಟರು. ಭಟ್ತರ ಮನೆಯಲ್ಲಿ ಕೆಲವರಿಗಾಗಿ ಅಡಿಗೆಯಾಗಿತ್ತು. ಎಲ್ಲರೂ ಹೊರಡುವುದನ್ನು ನೋಡಿ ಭಟ್ತರ ಹೆ೦ಡತಿ "ಅತೋ! ಎಲ್ಲರೂ ಹೊರ್ಟ್ವಲಿ. ಯಾ ನಿ೦ಗೊಕ್ಕೆಲ್ಲಾ ಅನ್ನ ಮಾಡಿಕಿದೆ" ಅ೦ದಳು. ಭಟ್ಟರೂ ಒತ್ತಾಯ ಮಾಡಿದರು. ಯಾರೂ ನಿಲ್ಲಲಿಲ್ಲ. ಮನೆಯಲ್ಲಿ ಮತ್ತೆ ಆರೆ೦ಟೇ ಜನರಾದರು. ಭಟ್ತರಿಗೆ ಭಣ ಭಣ ಅನಿಸಿತು. ಎಷ್ಟು ಒತ್ತಾಯ ಮಾಡಿದರೂ ನಿಲ್ಲಲಿಲ್ಲವೆ೦ದುಕೊ೦ಡು ಅವರು ತುಸು ಬೇಸರ ವ್ಯಕ್ತ ಮಾಡಿದರು. ನೆರೆಹೊರೆಯವರು ಅತಿಥಿಗಳಾದರೆ ಯಜಮಾನನಿಗೆ ಒ೦ದು ಬಗೆಯ ಹೌಸು.
ಸೂಡಿ ಬೀಸುತ್ತ ಹೊರಟ ಗ್ರಾಸ್ತರು ದಾರಿಯ ಮೇಲೆ ಆಡಿಕೊಳ್ಳಹತ್ತಿದರು. "ನೋಡ್ದ್ಯಾ ಗೋಪಾಲಭಟ್ಟ ! ಎ೦ಥಾ ಪಕ್ಕಾ ! ಸೂಡಿ ತರ್ಸಿಟ್ಟು ವಳ್ಕಳೀ ಹೇಳಿ ವತ್ತಾಯ ಮಾಡ್ತ !"
"ಭಾರೀ ಪಕ್ಕಾ ಮನ್ಶಾ ಅವ. ನೋಡ್ದ್ಯ, ಸಕ್ರೆನೇ ಹಾಕದ್ದೇ ಚಪೆ ಚಾ ಕುಡೀಸ್ದ."
"ಚಾಕ್ಕ೦ತೂ ಸಕ್ರೆ ಕಮ್ಮಿ ಹೇಳು. ಅವಲಕ್ಕಿಗ ಒ೦ದ್ ಹನಿ ಬೆಲ್ಲಾನಾದ್ರೂ ಹಾಕವೋ ಬೇಡ್ದೋ"
" ಆ ಮಜ್ಗೆ ಥೇಟು ಬಿಳೀ ನೀರು ! ಅಲ್ಲ ಸೊಲ್ಪ ಕಮ್ಮಿ ನೀರ್ ಹಾಕಿ ಬೆರ್ಸಿದ್ರೆ ಅವ್ನ ಮನೆ ತೊಳ್ದ್ ಹೋಗ್ತಿತ್ತಾ ?"
ಸೂಡಿಗಳು ಉರಿಯುವ ವರೆಗೂ ಇ೦ಥ ಮಾತುಗಳು ನಡೆದವು.
No comments:
Post a Comment