Feb 15, 2012

ಮರ್ಯಾದಾ ಪುರುಷೋತ್ತಮ ರಾಮ


ವಂದು ಸಲವಾ ರಾವಣ ಗೋಳೋ ಹೇಳಿ ಹತ್ತು ಬಾಯಿಂದ ತೀಡತ ಕುಂತಿರತ. ಊಟನೂ ಮಾಡತ್ನಿಲ್ಲೆ.  ರಾವಣನ ಹೆಂಡತಿ ಮಂಡೋದರಿ ಎಷ್ಟೇ ವತ್ತಾಯ ಮಾಡಿರೂ ಊಟ ಮಾಡತ್ನಿಲ್ಲೆ. ’ಯಂಗೆ ಹಶಿವಿಲ್ಲೆ” ಹೇಳತ.

ಮಂಡೋದರಿ ಆದರೂ ಬಿಡದೇ ಪ್ರೀತಿ ಮಾಡಕಂಡು ’ಎಂತಾ ಆತೂ ಅದನಾರೂ ಹೇಳಿ... ಸುಮ್ ಸುಮ್ಮನೇ ಹಶಿವಿಲ್ಲೆ ಅಂದರೆ ಯಾ ನಂಬತ್ನಿಲ್ಲೆ .. ಹತ್ ಬಾಯಲ್ಲಿ ಹತ್ ಮಣ ಅನ್ನ ತಿಂಬವು ನೀವು.. ಯಂಗೊತ್ತಿಲ್ಯ... ಇವತ್ತೆಂತೋ ಬೇಜಾರಲ್ಲಿ ಬಂಜ್ರಿ... ಯೆಂತ ಆತು ಹೇಳಕಳಿ.... ಮನಸೂ ಹಗೂರಾಗತು’ ಹೇಳತು 

'ಎಂತ ಹೇಳಕಂಬದೇ? ಸಾಯಲಿ... ಆ ಸೀತೆ ಯಂಗೆ ವಲೀತಿಲ್ಲೆ..... ಯೆಂತ ಮಾಡವೇ ಯಾನು.... ಅದು ವಂದ್ ಸತಿ ಕಣ್ಣೆತ್ತಿ ಯನ್  ಮೊಕ ನೋಡಬುಟಿದ್ರೆ ಉದ್ದಾರಾಗೋಗತಿದ್ದೆ... ಅದಕ್ ಹಠ... ನೋಡುಲೇ ತಯಾರಿಲ್ಲೆ’ ಹೇಳತ ರಾವಣ.

’ಅಯ್ಯ ಇಷ್ಟಕ್ಕೇ ತೀಡೂದ? ನಿಮಗೆ ಹೇಕೊಡವ? ಮಾಯಾ ರಾವಣ ಹೇಳಿ ಕರೆತ ನಿಮಗೆ ಯೆಲ್ಲವ...ಮಾವನ್ನೇ ಚಿನ್ನದ ಜಿಂಕೆ ಮಾಡಿದ್ರಿ ...ರಾಮನ ಹಾಂಗೇ  ವೇಷ ಹಾಯ್ಕಂಡು ಹೋಗಿ ಸೀತೆ ಹತ್ರಕ್ಕೆ... ನಿಮ್ಮನೇ ರಾಮ ಹೇಳಿ ತಿಳಕಂಡು ವಲೀಗು’ ಹೇಳಿ ಐಡಿಯಾ ಕೊಡತು ಮಂಡೋದರಿ. ಎಷ್ಟಂದರೂ ರಾವಣ ಬುದವಂತ.... ಸಾವಾಸದಿಂದ ಮಂಡೋದರಿನೂ ಹುಶಾರಾಗಿತ್ತು. 

’ಅಯ್ಯ ಮಳ್ ಮಂಡೋದರಿ... ಯಾ ಯೆಂತ ದಡ್ಡ ಮಾಡಕಂಬುಟ್ಯ?? ಅದೆಲ್ಲ ಮಾಡಿ ನೋಡಿದ್ನೇ... ಆಗತಿಲ್ಲೆ... ನಾ ರಾಮನ ವೇಷ ಹಾಯ್ಕಂಡು ಹೋಗವು ಹೇಳಿ ಸುಮಾರು ಸಲ ಪ್ರಯತ್ನ ಮಾಡಿದ್ದೆ.... ಆದರೆ ಯಾವಾಗ ನಾ ರಾಮನ ವೇಷ ಹಾಯ್ಕತ್ನ ಆವಾಗೆಲ್ಲ ಕಂಡ ಕಂಡ ಹೆಂಗಸರೆಲ್ಲ ಅಮ್ಮನ ಹಾಂಗೇ ಕಾಣತ್ವೇ. ಆ ರಾಮ ಯೆಂಥ ಮಹಾಪುರುಷ ಹೇಳಿ ಅರ್ಥ ಆತೇ ಈಗ’ ಅಂದ್ನಡಾ

(" ರಾಮನ ವೇಷ ಹಾಯ್ಕಂಡ್ರೇ ರಾಮನ ಗುಣ ಬತ್ತು ಹೇಳಾದರೆ ಖುದ್ದು ರಾಮ ಎಷ್ಟು ಆದರ್ಶ ಆಗಿಕ್ಕು...ರಾಮನ ವ್ಯಕ್ತಿತ್ವಕ್ಕೆ ಇದಕ್ಕಿಂತ ಉದಾಹರಣೆ ಬೇಕ?" ಹೇಳಿ ಮುಗಿಸಕಾಗಿತ್ತು ಕಥೆಯ... ಆದರೆ ಯಾವಾಗನ ಹಾಂಗೇಯ ಕೆಲ ಕ್ಲಿಷ್ಟ ಪದ ನಮಗೇ ಮುಳ್ಳಾಗತಲೀ ಹೇಳಿ ಮನಸಲ್ಲಿ ಬಂತು. ಸುಮ್ಮಂಗಾದೆ)
 (ಇಷ್ಟು ಕಥೆ ಕೇಳತ ಕೇಳತ ಬಹುಶಃ ಮಲಗಿಕ್ಕು ಕೂಸು ಹೇಳಿ ಮೊಕ ನೋಡೀರೇ ಕಣ್ಣು ಮುಚ್ಚಕಂಡೇ ಇತ್ತು ಕೂಸು. ಸರಿ ಹೇಳಿ ನಾನೂ ಕಣ್ ಮುಚ್ಚುವ ತಯಾರಿ ಮಾಡದೆ.... ೫-೬ ಸೆಕೆಂಡಲ್ಲೇ.... ’ಇಷ್ಟ್ ಸಣ್ ಕಥೇ.... ಮತ್ತೊಂದು ಹೇಳು ಟೂ ಟೂ ಕಥೆ ಹೇಳು ಪಪ್ಪಾ’ ಹೇಳಿದ್ದ ಕೇಳಿ ಕಣ್ ಬಿಡಕಾತು. ”ಹಣೇಬರವೇ.... ಮಧ್ಯಾಹ್ನ ಜಾಸ್ತಿನೇ ಮಲಗ್ಸ್-ಬುಟಿತ್ತಕು ಯಮ್ಮನೆ ಪ್ರಾಣಿ ಥೋ’ ಹೇಳಿ ಮನಸಲ್ಲೇಯ ಹೆಂಡತಿಗೆ ಶಾಪ ಹಾಯ್ಕಂಡು ಮತ್ತೊಂದು ಕಥೆ ಹೆಣದೆ ...ಹೆಣಗಾಡದೆ.)

ಮತ್ತೊಂದ್ ಬದೀಗೇ ಬೀಚ್ ನಲ್ಲಿ ವಾನರ ಸೇನೆ ಹನಮಂತನ ಮುಂದಾಳತ್ವದಲ್ಲಿ ಲಂಕೆಗೆ ಹೋಪುಲೆ ದಾರಿ ಬೇಕಾತಲೀ..... ರಾವಣನ ಸೋಲಸಿ ಸೀತೆ ಕರ್ಕ ಬಪ್ಪುಲೆ. ಅದಕೆಯ ಸೇತುವೆ (ಬ್ರಿಜ್) ಕಟ್ಟೂ ತಯಾರಿ ಮಾಡತ ಇರತ. ಬ್ರಿಜ್  ಕಟ್ಟುಲೆ ದೊಡ್ ದೊಡ್ ಕಲ್ಲ ಗುಡ್ಡದಿಂದ ತಗಂಬಂದು ಸಮುದ್ರಕ್ಕೆ ಹಾಕತ ಇರತ. ಆದರೆ ಪಾಪ ಎಷ್ಟ್ ಕಲ್ಲ್ ಹಾಕಿರೂವ ಹಾಕಿದ ಕಲ್ಲೆಲ್ಲವಾ ಮುಳಗೇ ಹೋಗತು ಪಾಪ. ಆ ಸಮುದ್ರಕ್ಕೆ ಯಾವ ಕಲ್ಲೂ... ಎಷ್ಟ್ ದೊಡ್ ಕಲ್ಲೂ ತಾಗತಿಲ್ಲೆ. ಹನಮಂತಂಗೆ ತಲೆಬಿಶೀ ಆಗೋಗತು. ರಾಮ್ ರಾಮಾ ಹೇಳಕತ್ತ ರಾಮನ ಹತ್ರ ಬತ್ತ. 
"ವಡ್ಯ, ವಾನರ ಸೇನೆ ಸೇತುವೆ ಕಟ್ಟವು ಹೇಳಿ ಹೆಣಗಾಡತ ಇದ್ದು. ಆದರೆ ಯೆಂತ ಮಾಡವು ಹೇಳೇ ಗೊತ್ತಾಗತ ಇಲ್ಲೆ. ಸಮುದ್ರಕ್ಕೆ ಹಾಕಿದ ಕಲ್ಲೆಲ್ಲವ ಮುಳಗಿ ಹೋಗತಿದ್ದು. ಯೆಂತಾರೂ ಮಾಡಿ ಸ್ವಾಮಿನ" ಹೇಳಿ ಕೈ ಮುಗದ್ನಡ.  

(ಇಲ್ಲಿ ಕಥೆಯ ಹೆಣೆತ ಮತ್ತು ಓಘದ ಮದ್ಯೆ ’ವಡ್ಯ’ ಹೇಳೂ ಶಬ್ದ ಕೂಸಿಗೆ ಹೊಸದು ... ಹೊಸ ಶಬ್ದ ಪ್ರಯೋಗ ಮಾಡೂಲಾಗ ಹೇಳೂದೇ ಮರತೋಗಿತ್ತು. ಸಿಕ್ ಬಿದ್ದಿದ್ದೆ. "ಹೇ ಹೆ... ವಡ್ಯಾ... ವಡ್ಯ ಹೇಳಿ ಯಾರಿಗೆ ಹೇಳತ ಹನಮಂತ? ಯೆಂತಕೆ ಹೇಳತ?" ಹೇಳಿ ವಟ್ಟೊಟ್ಟಿಗೇ ಬಂದ ಪ್ರಶ್ನೆಗೆ ಆಹುತಿ ಆದೆ. "ವಡ್ಯ ಅಂದರೆ ಬಾಸ್ ಹೇಳದಾಂಗೆ... ಸರ್ ಹೇಳದಾಂಗೇ.... ಹನಮಂತ ರಾಮಂಗೆ ಹಾಂಗೇ ಕರೆತಿದ್ದ" ಹೇಳಿ ಒಕ್ಕಣೆ ಕೊಡಕಾತು. ಇದರಿಂದ ಕೂಸಿನ ವರ್ಕಕ್ಕೂ ಪೋಸ್ಟ್ ಪೋನ್ ಕೊಟ್ಟಂಗಾತು....”ದೇವರೇ ಮೂರನೇ ಕಥೆ ಹೇಳೂ ಪ್ರಸಂಗ ಬರದೇ ಇರಲಪ’ ಹೇಳಿ ಬೇಡಕಂಡೆ) 

 ಆವಾಗ ರಾಮ ಹನಮಂಗೆ ಹೇಳತ.... ’ಹೆದರಡ ಹನಮಂತ..ನಿಂಗೆ ವಂದು ಕಲ್ಲ ಮಂತ್ರಿಸಿ ಕೊಡತೆ... ಸಮುದ್ರ ರಾಜಂಗೆ ಕೈ ಮುಕ್ಕಂಡು ಸಮುದ್ರಕ್ಕೆ ಹಾಕು.. .ಎಲ್ಲ ಸುರಳೀತ ಆಗತು’ ಹೇಳಿ ವಂದು ಕಲ್ಲ ಮುಟ್ಟಿ ಮಂತ್ರ ಮಾಡಿ ಹನಮಂತಂಗೆ ಕೊಡತ. ಹನಮ ಭಕ್ತಿಯಿಂದ ಆ ಕಲ್ಲ ಹೆಗಲ ಮ್ಯಾಲೆ ಹೊತಗಂಡು ಹೋಗಿ ಆ ಕಲ್ಲಿನ ಮ್ಯಾಲೆ ’ಶ್ರೀರಾಮ’ ಹೇಳಿ ಬರದು ಸಮುದ್ರಕ್ಕೆ ಹಾಕತ.... ಆಕಲ್ಲು ಮುಳುಗದೇಯ ಗಟ್ಟಿ ಕುಂತಗತ್ತು.

ಕಡೆಗೆ ಹನಮಂತ ಅವನ ವಾನರ ಸೇನೆ ಯೆಲ್ಲ ಕಲ್ಲಿನ ಮ್ಯಾಲೂವ ’ಶ್ರೀರಾಮ’ ಹೇಳಿ ಬರದೂ ಬರದೂ ಸಮುದ್ರಕ್ಕೆ ಹಾಕತ... .ಕಲ್ಲಿನ ಸೇತುವೆ ತಯಾರಾಗತು.

(ಕೂಸು ಮಲಗತ ಹೇಳಿ ಪರೀಕ್ಷೆ ಮಾಡಿ ನೋಡ್ವ ಕಂಡತು... ತಂಗೀ ನಿದ್ ಬಂತ ಕೇಳಿದ್ದಕ್ಕೆ ಉತ್ತರ ಬರದ್ದೇ... ’ಮುಂದ್ ಹೇಳು’ ಹೇಳಿ ಆರ್ಡರ್ ಬಂತು. ವಟೂ ಇವತ್ತು ಕಷ್ಟಿದ್ದಪ ಅನ್ಸಿ ಹೋತು)

ಸೇತುವೆ ತಯಾರಾದ ಸುದ್ದಿ ಲಂಕೆವರೆಗೂ ಮುಟ್ಟತಡ.  ಲಂಕೆಯ ಎಲ್ಲ ಜನ  ಮಾತಾಡಕಂಬಲೆ ಶುರು ಮಾಡದ್ವಡ. ಹೀಂಗಡಾ ಹಾಂಗಡಾ.. ರಾಮನ ಹೆಸರು ಬರದ್ರೆ ಕಲ್ಲು ತೇಲತಡಾ ಹೇಳಿ ಸುದ್ದಿ ಆಗಿ ಜನ ಸಮುದ್ರ ದಂಡೆಗೆ ಹೋಗಿ ರಾಮ ರಾಮ ಹೇಳಿ ಬರದೂ ಬರದೂ ಸಮುದ್ರಕ್ಕೆ ಹಾಕಿ ಪರೀಕ್ಷೆ ಮಾಡೂಲೆ ಹಣಕದ್ವಡ. ಆದರೆ ವಂದು ಕಲ್ಲೂ ತೇಲಿದ್ದಿಲ್ಯಡ ಲಂಕೆಯ ಸಮುದ್ರದಲ್ಲಿ.

ಈ ಅಡಾಪಡಾ ಸುದ್ದಿ ಮಂಡೋದರಿ ಕಿವಿಗೂ ಬಿತ್ತು ಹೇಳಾತು... ಹೆಂಗಸರಿಗೇ ಮೊದಲು ಸುದ್ದಿ  ಗೊತ್ತಪ್ಪುದು. ರಾವಣನ ಹತ್ರ ಬಂದು ಹೇಳತಡ.. ’ಹೌದಾ .. ಕೇಳತಾ?? ನೋಡಕಾಗಿತ್ತು.. ಅದು ಹೇಂಗೆ ತೇಲತು ಹೇಳಿ.... ಆದರೆ ಇಲ್ಲಿ ರಾಮ ಹೇಳಿ ಬರದು ಹಾಕದ ಕಲ್ಲು ತೇಲತಿಲ್ಯಡ... ಯೆಂತನ ವಿಚಿತ್ರನಪಾ!’ 
ರಾವಣ ’ಓ ಅದೇನು ಮಹಾ.... ಮಳೀ ಅಲ್ಲಿ ರಾಮನ ಜಾಗ ಅವನ ಹೆಸರಿನ ಕಲ್ಲು ತೇಲತು... ಲಂಕೆ ಯಂದಲ್ಲದನೇ... ಇಲ್ಲಿ ರಾವಣ ಹೇಳಿ ಬರದ್ರೆ ತೇಲತು... ಆ ಜನಕ್ಕೆ ಬುದ್ದಿಲ್ಲೆ ಹೇಳೀ ನಿಂಗೂ ತಲೆಲಿ ಯೆಂತೂ ಇಲ್ಯನೇ?’ ಅಂದ್ನಡ.

ಮಂಡೋದರಿಗೆ ತಡಕಂಬಲೇ ಆಜಿಲ್ಯಡ. ’ಒಹೋ ಹಾಂಗ?... ಹಾಂಗರೆ ವಂದು ಸಲ ನೋಡಕಾಗಿತ್ರ ಯಂಗೂವ’ ಅಂತಡ. 
’ಹೆದರಡ... ನೀ ಕೇಳೂದೆಚ್ಚ... ನಾ ತೋರಸೂದೆಚ್ಚ .. ಬಾ ತೋರಸ್ತೆ.... ಯಾನೇ ಖುದ್ ಬತ್ತೆ. ಬಾ’ ಹೇಳಿ ಸಮುದ್ರ ದಂಡೆಗೆ ಕರಕಂಡು ಹೋದ್ನಡ.
 ಹೋಗಿ ವಂದು ದೊಡ್ ಕಲ್ಲು ತಗಂಡು ಅದ್ರ ಮೇಲೆ ’ರಾವಣ’ ಹೇಳಿ ಬರದು ಯೆಂತೆಂತೋ ಮಂತ್ರ ಮಾಡದಾಂಗೆ ಮಾಡಿ ಸಮುದ್ರಕ್ಕೆ ಹೊತಾಕದ್ನಡ. ನೋಡೀರೆ ಪವಾಡದಾಂಗೇಯ ಆ ಕಲ್ಲೂ ತೇಲುಲೆ ಹಣಕತಡ. 


(ಮಧ್ಯ ವಂದ್ ಸಲ ಕೂಸು ಮಲಗತ ನೋಡ್ವ ಹೇಳಿ ಕುತೂಹಲ ಬಂದ್ರೂವ ಎದಬುಟ್ರೆ ಹೇಳಿ ಹೆದರಿಕೆಯಿಂದ ...ಸುಮನೇ ಬಿಲಕ್ಕೆ ಕೈ ಹಾಕಿ ಕಚ್ಚಸಗಂಬೂದೆಂತಕೆ ... ಕಥೆನೇ ಮುಂದವರಸುದು ಲಾಯಕ್ಕು ಕಂಡತು)

ಮಂಡೋದರಿಗೆ ಆಶ್ಚರ್ಯ ... ಆದರೂ ವನ್ನಮನಿ ಸಂಶಯ. ’ಯಮ್ಮನೇವು ಯೆಂತಾರೂ ಕಿತಾಪತಿ ಮಾಡದ್ದೇ ಇಪ್ಪವಲ್ಲ .. ಯೆಂತೋ ಮಾಡಿರವು’ ಹೇಳಿ ಮನಸಲ್ಲಿ ಅದಕೆ. ಮನೆಗೆ ಬರಕಾರೆ ತಡಕಂಬಲಾಗದೇ ’ಅದೇಂಗೆ ತೇಲವಂಗೆ ಮಾಡಿದ್ರಿ?? ಖರೇ ಹೇಳಿ.... ರಾಮ ಆದರೆ ದೇವರು - ಯೆಂತೂ ಮಾಡಲಕ್ಕು.. ನೀವೆಂತ ಕುತಂತ್ರ ಮಾಡಿದ್ರಿ... ಯನ್ ಮೇಲೆ ಆಣೆ’ ಅಂತಡ. 

ಸುಮ್ನಿರೇ ಯೆಂತೂ ಇಲ್ಲೆ.... ಆ ಕಲ್ಲಿಗೆ ಮಂತ್ರ ಗಿಂತ್ರ ಯೆಂತು ಹಾಕಿದ್ನಿಲ್ಲೆ..... ಹಾಕಕಾರೆ ಕಲ್ಲಿಗೆ ಹೇಳಿದಿದ್ದೆ.. ’ನೀ ಮುಳಗಿದರೆ ಶ್ರೀ ರಾಮನ ಆಣೆ’ ಹೇಳಿ.. .ಅದಕೇ ಅದು ತೇಲತಿದ್ದು ಮಳೂ.’ನೀ ಯನ್ನ ಸರೀ ಅರ್ಥ ಮಾಡಕಂಜ್ಯೇ ಮಾರಾಯ್ತಿ’  ಅಂದ್ನಡ.

ನೋಡು ಹೌದ... ರಾಮ ಅಂದ್ರೆ ಮರ್ಯಾದಾ ಪುರುಷೋತ್ತಮ... ಕಲ್ಲಿಗೂ ಅವನ ಮ್ಯಾಲೆ ಗೌರವ ಇದ್ದು ಅಂದ್ರೆ ಅಂವ ಯೆಷ್ಟು ದೊಡ್ಡ ದೇವರಾಗಿಕ್ಕು ಹೌದ.. ಅದಕೇಯ ರಾಮನ ಭಜನೆ ಯಾವಾಗಲೂ ಮಾಡವು... ಮಲಗಕಾರೆ ಹೇಳವು
"ಶ್ರೀ ರಾಮ ಜಯರಾಮ ಜಯ ಜಯ ರಾಮ. ಹರೇ ರಾಮ ಹರೇ ರಾಮ ರಾಮ ರಾಮ ಹರೇ ಹರೇ"
(ಹೇಳಿ ಮುಗಿಸಕಾರೆ ಅಂದಾಜು ಹಾಕಿದಿದ್ದೆ... ಮದ್ ಮಧ್ಯ ವಂದೊಂದು ಹೊಸ ಪದ ಬಂದರೂ ಪ್ರಶ್ನೆ ಯೆಜ್ಜಿಲ್ಲೆ... ಅಂದರೆ ಕೂಸು ಸುಖನಿದ್ರೆಗೆ ಜಾರಿಕ್ಕು ಹೇಳಿ .... ಅದು ಹೌದು .... ಹರೇ ರಾಮ ರಾಮ)

6 comments:

  1. ಲೈಕ್ ಲೈಕ್ :-)

    >> ಆವಾಗ ಕಂಡ ಕಂಡ ಹೆಂಗಸರೆಲ್ಲ ಅಮ್ಮನ ಹಾಂಗೇ ಕಾಣತ್ವೇ. ಆ ರಾಮ ಯೆಂಥ ಮಹಾಪುರುಷ ಹೇಳಿ ಅರ್ಥ ಆತೇ ಈಗ

    ಮಸ್ತ್ imagination :)

    ReplyDelete
  2. ಕತೆ ಎಲ್ಲ ಚೊಲೊ ಹೇಳಿದ್ಯೊ ಶ್ಯಾಮಣ್ಣ... ವಟ್ ಮಾಡಿ ಇಟಗಳವು.. ಹೇಳಲೆ ಬೇಕಾಗ್ತು..:) ಆದ್ರೆ ಈ "ಯಮ್ಮನೆ ಪ್ರಾಣಿ" ಅಂದ್ರೆ ಯೆಂತದು ಹೇಳಿ ಗುತ್ತಾಜಿಲ್ಲೆ.. ಯನ್ನಪ್ಪನು ಹಂಗೇ ಹೇಳತ.. ಕೇಳಿರೆ "ಪ್ರಾಣೇಶ್ವರಿ" ಹೇಳದರ ಹೃಸ್ವರೂಪನೆ ಅದು ಹೇಳತ.. ನಿಂದೂ ಹಂಗೇಯ ಮತೇ? :))

    ReplyDelete
  3. ಹವ್ಯಕ ಭಾಷೇಲಿ ರಾಮಾಯಣ, ಹ್ಹ ಹ್ಹ ಹ್ಹ! ಮಜಾ ಇತ್ ಕತೆ

    ReplyDelete
    Replies
    1. ಧನ್ಯವಾದ ದೀಪಸ್ಮಿತಾ. ಓದಿದ್ದಕ್ಕೆ

      Delete