Feb 14, 2012

ಕೆಂಪೀ ಹನಮಾ

’ಹನಮಂತ ಕೆಂಪಕೆ ಯೆಂತಕಿದ್ದಾ?’ ಹೇಳ ಪ್ರಶ್ನೆ ಮರುದಿನ ನೆನಪಾತು ಕೂಸಿಗೆ. ಅದೂ ಬೆಳಗ್ಗೆ ಎದ್ದ ಕೂಡಲೇಯ. ’ಈಗಲ್ಲ ಮುದ್ದೂ...ಈಗ ನೀ ಶಾಲೆಗೆ ಹೋಗಿ ಬಂದು  ಊಟ ಮಾಡಕಂಡು ಮಲಗಿ ಎದ್ದಕ. ಅಷ್ಟರ ಒಳಗೆ ಪಪ್ಪ ಬತ್ತೆ...ಸಂಜಪಾಗ ಮಲಗಕಾರೆ ಕಥೆ ಹೇಳತೆ’ ಹೇಳಿ ಸಮಾಧಾನ ಮಾಡಿದ ಮ್ಯಾಲೆ ಕೂಸು ಸುಮ್ಮಂಗಾತು ಅಂತೂವ. ’ದ್ಯಾವರೇ ಏನ್ ಕಷ್ಟಾ’ ಅಂತು ಯಮ್ಮನೆ ಪ್ರಾಣಿ.

ಸಂಜೆ ಊಟ ಮಾಡಿ ಮಲಗ ಹೊತ್ತಲ್ಲಿ ಶುರು ಆತು ವರಾತ. ’ಪಪ್ಪಾ... ಕಹಾನೀ ಸುನಾವ್... ನೀ ಸುಬಹ್ ಹೇಳಿದ್ಯಲ. ನಾನು ಲಂಚ್ ಡಿನ್ನರ್ ಎಲ್ಲ ಮಾಡಿದ್ದೆ. ದೂದೂ ಕುಡದ್ದೆ.... ನೌ ಸ್ಟೋರೀ’ ಹೇಳಿ ಹಿಂದಿ ಇಂಗ್ಲೀಷ್ ಮಿಸಳ್ ಹೈಗ ಭಾಷೆಲಿ. ವಂದ್ ನಮನಿ ಯೋಚನೆ ಮಾಡಿರೆ ಯನ್ ಮಗಳು ಎರಡು ಮೂರು ಭಾಷೆಲಿ ಮಾತಾಡತು ಹೇಳಿ ಖುಷಿ ಆದರೂವ...ಮತ್ತೊನ್ನಮನಿ ಯೋಚನೆ ಮಾಡೀರೇ... ’ಅಯ್ಯ ರಾಮ ಎಲ್ಲ ಭಾಷೆಯ ಮರ್ಯಾದೆ ತೆಗತ್ತಲೀ ಇದು’ ಅನ್ಸಿ ಹೋಗತು ಆ ಪ್ರಶ್ನೆ ಬ್ಯಾರೆ.  ಆದರೆ ವಂದ್ ಮಾತ್ರ ಸುಳ್ಳಲ್ಲ...ಈ ಮೂರೂ ಭಾಷೆಯ ಯಾವುದೇ ಶಬ್ದ ಕೇಳಿರೂವ ಅದರ ಅರ್ಥ ಗೊತ್ತಿದ್ದು ಅದ್ಕೆ ಬಿಲ.. ಅದೆಂತದೋ ತರ್ಜುಮೆ ಹೇಳತ್ವಲೀ... ವಾಕ್ಯ ತರ್ಜುಮೆ ಮಾಡುಲೆ ಬರದ್ದೇ ಇದ್ರೂವ... ಶಬ್ದದ ತರ್ಜುಮೆ ಮಾಡತು ಹೇಳೇ ಖುಷಿ ನಮಗೆ.
ಸರಿ ’ಕೆಂಪಿ ಹನಮ’ ಈಗ (ಹಲಗೇರಿಯ ನಮ್ಮ ಮಾಣಿ - ಹ ನ ಮಾ ಅಲ್ಲ ಇಂವ)

ಸಾಮಾನ್ಯವಾಗಿ ಸೀತೆಗೆ ಟೈಮ್ ಪಾಸಿಗೆ .. ಹೊತ್ ಹೋಗತಿಲ್ಲೆ ಹೇಳಾದಾಗ ಮಾತಾಡೂಲ್ ಸಿಕ್ಕುದು ಹನಮಂತ ವಬ್ಬನೇಯ. ಪಾಪ ಅಂವ ರಾಮ ಭಕ್ತ ... ಸೀತೆ ರಾಮನ ಹೆಂಡತಿ ಹೇಳಿ ಗೌರವ. ಹೀಂಗೇ ಮಾತಾಡತ ಮಾತಾಡತ ... ಸುದ್ದಿ ಮಧ್ಯದಲ್ಲಿ ಹನಮಂಗೆ ವಂದು ಸಂಶಯ ಬಂತು... ಯೆಂತಪಾ ಅಂದ್ರೆ.... ’ಹೌದು ಈ ಮದುವೆಯಾದ ಹೆಂಗಸರೆಲ್ಲವ ಹಣೆ ಮ್ಯಾಲೆ ಕುಂಕುಮ (ಸಿಂಧೂರ) ಇಟಗತ್ತ ಯೆಂತಕೆ?’ ಹೇಳಿ. 

ಕೇಳೇಬುಡ್ವ ಮತ್ತೆಂತದು ಹೇಳಿ ಸೀತಾಮಾತೆ ಹತ್ರ ಕೇಳೇಬುಟನಡ. "ಅಮ್ಮ (ಅಂವ ಸೀತೆಗೆ ಅಮ್ಮ ಹೇಳೇ ಕರೇತಿದ್ದ) ನಿಂಗ ಹೆಂಗಸರೆಲ್ಲವ ಹಣೆ ಮ್ಯಾಲೆ ಕುಂಕುಮ ಯೆಂತಕೆ ಇಟಗತ್ರಿ? ಯಾ ಸುಮಾರು ದಿನದಿಂದ ಕೇಳವು ಮಾಡಿದಿದ್ದೆ... ಕಾಲ ಕೂಡಿ ಬಂದಿತ್ತಿಲ್ಲೆ. ಯಾ ಕೇಳವು ಮಾಡದಾಗ ನೀ ಸಿಗತಿದ್ದಿಲ್ಲೆ.... ನೀ ಸಿಕ್ಕದಾಗ ಯಂಗೆ ಮರವು ಸಾಯಲಿ.. ಅದೆಂತಕೆ ಇಟಗತ್ರಿ ನಿಂಗ?" 

ಸೀತೆ ಹೇಳತಡಾ - "ಹನಮಾ... ಹೆಂಗಸರ ಹಣೆ ಮೇಲೆ ಕುಂಕುಮ ಇದ್ರೆ ಗಂಡನ ಆಯುಷ್ಯ ಜಾಸ್ತಿ ಆಗತಡ. ಗಂಡಂಗೇ ಹೇಳಿ ಕುಂಕುಮ ಇಟಗಂಬದು. ವಂದು ಹೆಣ್ಣಿಗೆ ಗಂಡ ಅಂದರೆ ಸರ್ವಸ್ವ. ಈಗ ನಾ ಹಣೆಗೆ ಕುಂಕುಮ ಇಟಗಂಬದು ನಮ್ಮನೆಯವ್ಕೆ ಹೇಳಿ  ಗೊತ್ತಾತ". 

ಹನಮ ಹೇಳದ್ನಡ " ಒಹೋ ಹಾಂಗರೆ ಆಚೆಮನೆ ಮಂಥರಜ್ಜಿ  ಹಣೆ ಮ್ಯಾಲೆ ಕುಂಕುಮ ಇಟಗಳದ್ದೇ ಇದ್ದಿದ್ದಕ್ಕೇಯ ಅದರ ಗಂಡಾ ದೇವರತ್ರ ಹೋದನ? ತಲೆ ಬೋಳಿಸಗಂಡು ತಲೆ ಮ್ಯಾಲೆ ಸೆರಗು ಹಾಯ್ಕಂಡು ಬ್ಯಾರೆ ಇರತು ಮಳ್ ವೇಷಾ" 
ಸೀತೆಗೆ ನೆಗೆ ಬಂದೋತಡ.."ಹೋಗಾ ಮಳಾ ಹನಮಂತಾ... ಹಾಂಗೆಲ್ಲ ಹೇಳೂಲಾಗ ಪಾಪ" ಅಂತಡಾ.
" ತಪ್ಪಾತು ..ಅಮ್ಮ.... ಸರಿ ಹಾಂಗಾರೆ ಈಗ ಯಾನು ಕುಂಕುಮ ಇಟಗಂಡರೆ ಯಾರು ಯಂಗೆ ಸರ್ವಸ್ವನೋ ಅವರ ಆಯುಷ್ಯ ಜಾಸ್ತಿ ಆಗ್ತು ಹೇಳಾತು. ಯಾನೂವ ರಾಮಂಗೆ ಹೇಳಿ ಕುಂಕುಮ ಇಟಗತ್ತೆ ಇವತ್ತಿಂದವ" ಅಂದ್ನಡ ಹನಮ. 
" ಹೂಂ...ಮೈತುಂಬ ಕುಂಕುಮ ಬಡಕ ಹೋಗು. ಮಳೂ...ಹಾಂಗೆಲ್ಲ ಗಂಡಸರೆಲ್ಲ ಹಣೆಮ್ಯಾಲೆ ಕುಂಕುಮ ಇಟಗತ್ವಿಲ್ಲೆ" ಅಂತಡ. 


ಹನಮ ಕೇಳವ... ಸೀತೆ ಹೇಳಿದ್ದು ಹೌದು ಮಾಡಕಂಡನಡಾ. ಹೋಗ್ ಹೋಗಿ ಮದಲೇ ಮಂಗ... ಸೀದ ಹೋದವನೇಯ ಕುಂಕುಮದ ಮರಗೆ ತಗಂಡು ಇಡೀ ಮೈತುಂಬ ಕುಂಕುಮ ಬಡಕಂಡುಬುಟನಡಾ. 


ಅದಕೇಯ ಮಂದಿರದಲ್ಲಿ ಇಪ್ಪ ಹನಮಂತ (ಹನುಮಾನಜೀ) ಕೆಂಪ. ರಾಮನ ಭಕ್ತ ಅಂವ. ರಾಮಂಗೆ ಹೇಳಿ ಕೆಂಪಕ್ಕೆ ಕುಂಕುಮ ಹಚಗಂಡು ಇರತ ಹದಾ. 

(ಗೊರಕೆ ಸೊಗೀತಿತ್ತು ಕೂಸು.... ಯನ್ನ ಕಥೆ ಬೇಜಾರು ಬಂತ ಯೇನ)
 



2 comments:

  1. ಹಹ್ಹಾ... ಮಸ್ತ್ ಕಥೆ ಕಟ್ಟಿದ್ದೆ :D

    ReplyDelete
  2. ಹ ಹ ಹಾ.. ಸೂಪರ್ ಶ್ಯಾಮಣ್ಣ :) ತುಂಬಾ ಇಷ್ಟ ಆತು :)
    ಇಲ್ಲೂ ಯನ್ನ ನೆನಪ್ ಮಾಡ್ಕಂಡಿದ್ದಕ್ಕೆ, ಆನು ಋಣಿ :)

    ReplyDelete